ಚಳ್ಳಕೆರೆಯಲ್ಲಿ ಈದ್ ಮಿಲಾದ್ ಸಂಭ್ರಮದಿಂದ ಆಚರಣೆ ಗಣ್ಯರ ಭಾಗಿ

 

 

 

 

ಚಳ್ಳಕೆರೆ ನಗರದ ಗಾಂಧಿನಗರದ ಮದೀನಾ ಮಸೀದಿ ಮೈದಾನದಲ್ಲಿ ಇಸ್ಲಾಂ ಧರ್ಮದವರು ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆ ಶಾಸಕರಾದ ಟಿ ರಘುಮೂರ್ತಿ ಚಾಲನೆ ನೀಡಿದರು.

 

 

ಈ ಸಂದರ್ಭದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಧರ್ಮಗಳು ಮತ್ತು ಧರ್ಮಕ್ಕೆ ಸಂಬಂಧಿಸಿದ ಗುರುಗಳು ಹೆಚ್ಚಾಗುತ್ತಿದ್ದು ಸಮಾಜವನ್ನು ತಿದ್ದುವ ಕೆಲಸವಾಗಬೇಕು ಇಂತಹ ಪವಿತ್ರವಾದ ದಿನದಂದು ಸಮಾಜ ಬದಲಾವಣೆ ಮಾಡುವ ದೀಕ್ಷೆ ಎನ್ನು ಕೈಗೆತ್ತಿಕೊಳ್ಳಬೇಕು ಧರ್ಮದ ಎಲ್ಲ ಬಾಂಧವರಿಗೆ ಅಲ್ಲಾರ ಸಂದೇಶಗಳು ದಾರಿ ದೀಪವಾಗಿವೆ ಇವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಸಾಮರಸ್ವನ್ನು ಮೂಡಿಸಬೇಕು ಎಂದು ಎಂದು ಮನವಿ ಮಾಡಿದರು. ಅವರು ಇಂದು ಇಸ್ಲಾಂ ಧರ್ಮದವರು ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿ ದರು ಇದೇ ಸಂದರ್ಭದಲ್ಲಿ ಉಪಸ್ಥಿತರಿದಂತಹ ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ ಈದ್ ಮಿಲಾದ್ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಪ್ರತೀಕವಾಗಿದೆ ಮಹಮದ್ ಪೈಗಂಬರ್ ಅವರು ಬೋಧಿಸಿದಂತಹ ಆದರ್ಶಗಳನ್ನ ತತ್ವಗಳನ್ನು ಎಷ್ಟರ ಪ್ರಮಾಣದಲ್ಲಿ ನಾವು ಸಮಾಜದಲ್ಲಿ ಅಳವಡಿಸಿಕೊಂಡಿವೆ ಎಂಬುದನ್ನು ಆಲೋಚಿಸಬೇಕಾಗಿದೆ ಪವಿತ್ರ ಅಬ್ಬದಂದು ಉಳ್ಳವರು ಅಬಲರಿಗೆ ದಾನ ನೀಡುತ್ತಾರೆ ನ್ಯಾಯ ನೀತಿ ಸತ್ಕಾರ್ಯಗಳಂತ ಕೆಲಸಗಳ ಕಡೆ ಚಿಂತನೆ ಮಾಡಬೇಕಾಗಿದೆ. ಇಡೀ ದೇಶಕ್ಕೆ ಸದ್ಭಾವನೆಯನ್ನು ಅರ್ಪಿಸಬೇಕಿದೆ ವಿಶ್ವಶಾಂತಿಯ ಕಡೆ ಮುಖ ಮಾಡಬೇಕಾಗಿದೆ ಸಮಾಜದ ಎಲ್ಲ ಬಾಂಧವರು ಒಂದು ಸತ್ಕಾರ್ಯದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಎಂದು ನುಡಿದರು ಜೆಡಿಎಸ್ ಅಭ್ಯರ್ಥಿ ರವೀಶ ಕುಮಾರಸ್ವಾಮಿ, ಪಿ .ಟಿ .ತಿಪ್ಪೇಸ್ವಾಮಿ ಸಮಾಜದ ಮುಖಂಡರಾದ ಸೈಯದ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours