ಚಿತ್ರದುರ್ಗ:ಕೋಟೆ ನಾಡು ಚಿತ್ರದುರ್ಗದಲ್ಲಿ ಶ್ರೀ ಅಹೋಬಲ ಟಿವಿಎಸ್ ಭರ್ಜರಿ ಹವಾ ಸೃಷ್ಟಿ ಮಾಡುತ್ತಿದೆ. ಇಷ್ಟು ದಿನ ಬೈಕ್ ಶೋ ರೂಂ ಗಳು ಅಷ್ಟೇನು ಪ್ರಚಾರ ಇರಲಿಲ್ಲ. ಆದರೆ ಶ್ರೀ ಅಹೋಬಲ ಟಿವಿಎಸ್ ಪ್ರಚಾರಕ್ಕೆ ಒತ್ತು ನೀಡಿ ಕೊಡುಗೆಗಳ ಮಹಾಪೂರವೇ ಹರಿಸಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಗಣ್ಯತಿ ಗಣ್ಯರು ಶುಭ ಹಾರೈಸಿದ್ದರು. ಈಗ ದಸರಾ ಮತ್ತು ನವರಾತ್ರಿ ಹಬ್ಬದ ಪ್ರಯುಕ್ತ ಅರುಣ್ ಅವರಿಗೆ ಶುಭ ಕೋರುವ ಹಂಬಲದಿಂದ ತನ್ನೆಲ್ಲ ಕೆಲಸವನ್ನು ಬದಿಗಿಟ್ಟು ರಾಜ್ಯದ ಪೋಲಿಸ್ ಇಲಾಖೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಖಡಕ್ ಅಧಿಕಾರಿ ಐಪಿಎಸ್ ಆಫೀಸರ್ ರವಿ ಡಿ.ಚನ್ನಣ್ಣನವರ್ ಅವರು ಭೇಟಿ ನೀಡಿ ಮಾಲೀಕ ಅರುಣ್ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ ಶ್ರೀ ಅಹೋಬಲ ಟಿವಿಎಸ್ ಉತ್ತಮ ಸಾಧನೆ ಮಾಡಿದೆ. ನಾರ್ತ್ ಕರ್ನಾಟಕ ಬೈಕ್ ಮಾರಟದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಮಾಲೀಕ ಅರುಣ್ ಅವರ ಶ್ರಮಕ್ಕೆ ದೇವರು ಪ್ರತಿಫಲ ನೀಡುತ್ತಿದ್ದಾನೆ. ಜನಸ್ನೇಹಿ ಶೋ ರೂಂ ಆಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ. ಇವರ ಶ್ರಮಕ್ಕೆ ಉತ್ತಮ ಫಲಿತಾಂಶ ಬರಲಿ ಜೊತೆಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ವಿಸ್ತಾರವಾಗಲಿ ಎಂದ ಆಶಯ ನನಗಿದೆ. ಬಹುದಿನಗಳ ಹಿಂದೆ ಶೋ ರೂಂಗೆ ಬರಬೇಕಿತ್ತು ಆದರೆ ಕಾರ್ಯ ಒತ್ತಡದಿಂದ ಆಗಿರಲಿಲ್ಲ ಎಂದರು. ಇದೇ ಸಂದರ್ಭದಲ್ಲಿ ಒಂದೆರಡು ಗ್ರಾಹಕರಿಗೆ ಕೀ ನೀಡುವ ಮೂಲಕ ಮಾರಟ ದ್ವಿಗುಣವಾಗಲಿ ಎಂದು ಮನ ತುಂಬಿ ಹಾರೈಸಿದರು.
ಅಹೋಬಲ ಟಿವಿಎಸ್ ಮಾಲೀಕ ಪಿ.ವಿ. ಅರುಣ್, ಕಾಲುವೇಹಳ್ಳಿ ಪಾಲಯ್ಯ, ವಿಜಯಕುಮಾರ್ ಮತ್ತು ಗ್ರಾಹಕರು, ನೂರಾರು ರವಿ ಡಿ.ಚನ್ನಣ್ಣನವರ್ ಅಭಿಮಾನಿಗಳು ಇದ್ದರು.
[t4b-ticker]
+ There are no comments
Add yours