ಚಳ್ಳಕೆರೆ : ತಾಲೂಕು ನಾಯಕನಹಟ್ಟಿ ಹೋಬಳಿ ಮಲ್ಲೂರಟ್ಟಿ ಗ್ರಾಮದ ಮಹಂತೇಶ್ 48 ವರ್ಷದ ವ್ಯಕ್ತಿ ಸಿಡಿಲು ಬಡಿತದಿಂದ ಮೃತಪಟ್ಟಿದ್ದು ಇವರ ಕುಟುಂಬದ ಶಂಕ್ರಮ್ಮ ಇವರಿಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಸಚಿವ ಬಿ. ಶ್ರೀರಾಮುಲು ಅವರು ಐದು ಲಕ್ಷ ರೂಗಳ ಚೆಕ್ಕನ್ನು ಇಂದು ವಿತರಣೆ ಮಾಡಿದರು.
ಸದರಿ ಸಂತ್ರಸ್ತರ ಮನೆಗೆ ಇಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ್ ಮತ್ತು ತಹಸೀಲ್ದಾರ್ ಎನ್.ರಘುಮೂರ್ತಿ ಅವರೊಂದಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬಹುದಾದ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕೊಡಿಸುವುದಾಗಿ ಕುಟುಂಬದಲ್ಲಿನ ಮಕ್ಕಳಿಗೆ ಅಗತ್ಯ ವಿದ್ಯಾಭ್ಯಾಸದ ಕುರಿತಂತೆ ಮತ್ತು ನೆರವಿನ ಕುರಿತಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿದಾಗ ತಹಶೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಸೂಚಿಸಿದರು ಇದೇ ಸಂದರ್ಭದಲ್ಲಿ ವಕೀಲರಾದ ಅಶ್ವತ ನಾಯಕ, ಬಿಜೆಪಿ ಮಂಡಲ ರಾಜ್ಯ ಎಸ್ಟಿ ಮೋರ್ಚಾ ಮುಖಂಡ ಪಾಪೇಶ್ ನಾಯಕ, ಪಟೇಲ್ ಎಸ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours