ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ನಮ್ಮ ಜನಾಂಗದ ಗುರುಗಳು ನಾಯಕ ಜನಾಂಗದ 7.5% ಮೀಸಲಾತಿ ರಾಜ್ಯ ಸರ್ಕಾರ ನೀಡುವವರಗೆ ನಾವು ವಾಲ್ಮೀಕಿ ಜಯಂತಿಯಲ್ಲಿ ಸಮಾಜ ಯಾರು ಭಾಗವಹಿಸಲ್ಲ , ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಮಾಡಿದರೇ ನಮಗೆ ತಕರಾರು ಇಲ್ಲ ಎಂದು ಒಗ್ಗಟ್ಟಿನಿಂದ ಅಭಿಪ್ರಾಯ ತಿಳಿಸಿದರು. ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸದಸ್ಯ ವೆಂಕಟೇಶ್, ದೀಪಕ್ ಕುಮಾರ್, ಮತ್ತು ಪ್ರೋ.ಗುಡ್ಡದೇಶ್ವರಪ್ಪ, ಲೆಕ್ಕಪತ್ರ ಇಲಾಖೆ ಶ್ರೀನಿವಾಸ್, ಮುಖಂಡರಾದ ಲಿಂಗನಾಯಕನಹಳ್ಳಿ ತಿಪ್ಪೇಸ್ವಾಮಿ, ಎಟಿಎಸ್ ತಿಪ್ಪೇಸ್ವಾಮಿ, ಬಚ್ಚಪ್ಪರನಹಟ್ಟಿ ಬಸವರಾಜ್, ಇಂಗಳದಳ್ ದರ್ಶನ್ , ಸೋಮೇಂದ್ರ, ಪ್ರಶಾಂತ್ ಭಾಗವಹಿಸಿದ್ದರು.
[t4b-ticker]
+ There are no comments
Add yours