ಚಳ್ಳಕೆರೆ-16 ಉಪ್ಪಾರ ಅಭಿವೃದ್ಧಿ ನಾನು ಸದಾ ಸ್ಪಂದಿಸುವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಸಾಗಲು ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯುವತ್ತ ಮುಂದಾಗಬೇಕು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ತಿಳಿಸಿದರು.
ಅವರು ತಾಲ್ಲೂಕಿನ ದುಗ್ಗಾವರ ಗ್ರಾಮದಲ್ಲಿ ಎಲ್ ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉಪ್ಪಾರ ಸಮಾಜ ಅಭಿವೃದ್ಧಿ ಸಮುದಾಯದ ಎಲ್ಲರೊಂದಿಗೆ ಒಗ್ಗೂಡಿ ಕೆಲಸ ಮಾಡುವೆ. ಸಮಾಜಕ್ಕೆ ಬೇಕಿರುವ ಸೌಲಭ್ಯಗಳನ್ನು ಪಡೆಯಲು ಯಾವುದೇ ಮುಜುಗರವಿಲ್ಲದೆ ನನ್ನ ಸಂಪರ್ಕಿಸಬಹುದು. ನಾನು ಸಮುದಾಯದ ಏಳಿಗೆಗೆ, ಸೇವೆಗೆ ಸದಾ ಸಿದ್ದವಿರುವೆ ಎಂದರು.
ಎಲ್ ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ಅಧ್ಯಕ್ಷ ಎಲ್ ಐಸಿ ದುಗ್ಗಾವರ ರಂಗಸ್ವಾಮಿ ಮಾತನಾಡಿ, ನಮ್ಮ ಸಮುದಾಯದ ಗಿರೀಶ್ ಉಪ್ಪಾರ ಸಮಾಜ, ಪಕ್ಷಭೇದ ಮರೆತು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಹಲವಾರು ಸೌಲಭ್ಯಗಳ ಜನರಿಗೆ ತಲುಪಿಸುವ ಹೊಣೆ ನಿಷ್ಠೆಯಿಂದ ನಿಬಾಯಿಸುತ್ತಿದ್ದಾರೆ. ಅವರ ಸೇವೆಗೆ ನಾವು ಸದಾ ಸಿದ್ದವೆಂದರು.
ಬುಡ್ನಹಟ್ಟಿ ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮೀದೇವಿ ರಂಗಸ್ವಾಮಿ, ಮುಖ್ಯ ಶಿಕ್ಷಕ ಮಾರಣ್ಣ, ಮುಖಂಡರಾದ ಈರಣ್ಣ, ಸಣ್ಣತಿಮ್ಮಣ್ಣ,ವಕ್೯ಶಾಪ್ ಟಿ.ನಾಗರಾಜ್, ಗುತ್ತಿಗೆದಾರರಾದ ಟಿ. ಬಸವರಾಜ್, ಆರ್ ನಾಗರಾಜ್, ರಂಗಸ್ವಾಮಿ, ರವಿ, ಈರಣ್ಣ, ನಾಗರಾಜು, ಶಿವರಾಜು, ಸಣ್ಣತಿಮ್ಮಪ್ಪ, ಗೋವಿಂದಪ್ಪಸ್ವಾಮಿ, ಮಂಜಣ್ಣ, ಟಿ ಗೋವಿಂದಪ್ಪ, ಟಿ.ಎಮ್ ಅಜಯ್ ಕುಮಾರ್, ಸಾಫ್ಟ್ವೇರ್ ಇಂಜಿನಿಯರ್ ಮಂಜಣ್ಣ, ಗೋವಿಂದ ಮುಂತಾದವರು ಇದ್ದರು.
+ There are no comments
Add yours