ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ)ಸೆಪ್ಟೆಂಬರ್13:
ಚಿತ್ರದುರ್ಗ ನಗರದ ಸಿ.ಕೆ.ಪುರ (ಕೆಳಗೋಟೆ) ಬಡಾವಣೆ ಮತ್ತು ಚಳ್ಳಕೆರೆ ತಾಲ್ಲೂಕಿನ ಜಾಜೂರು ಎಸ್.ಸಿ.ಕಾಲೋನಿ, ನಾರಾಯಣಪುರ ಎಸ್.ಟಿ.ಕಾಲೋನಿ, ಪುಟ್ಲಾರಹಳ್ಳಿ ಎಸ್.ಟಿ.ಕಾಲೋನಿಯಲ್ಲಿ ಪಡಿತರ ಚೀಟಿದಾರರ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರದುರ್ಗ  ನಗರದ ಸಿ.ಕೆ.ಪುರ (ಕೆಳಗೋಟೆ) ಕೇಂದ್ರ ಸ್ಥಾನದಲ್ಲಿ – 489, ಚಳ್ಳಕೆರೆ ತಾಲ್ಲೂಕಿನ ಜಾಜೂರು ಎಸ್.ಸಿ. ಕಾಲೋನಿಯ ಕೇಂದ್ರ ಸ್ಥಾನದಲ್ಲಿ -150,  ನಾರಾಯಣಪುರ ಎಸ್.ಟಿ.ಕಾಲೋನಿಯ ಕೇಂದ್ರ ಸ್ಥಾನದಲ್ಲಿ -285, ಪುಟ್ಲಾರಹಳ್ಳಿ ಎಸ್.ಟಿ.ಕಾಲೋನಿಯ ಕೇಂದ್ರ ಸ್ಥಾನದಲ್ಲಿ -272 ಪಡಿತರ ಚೀಟಿಗಳು ಇವೆ.
ಆಸಕ್ತರು ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿನದೊಳಗಾಗಿ ಅಂದರೆ ಅಕ್ಟೋಬರ್ 12ರೊಳಗಾಗಿ ನಮೂನೆ-“ಎ”ನಲ್ಲಿ ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಚಿತ್ರದುರ್ಗ ಇವರಿಗೆ ಅರ್ಜಿ ಸಲ್ಲಿಸಬಹದು. ನಿಗಧಿತ ಅವಧಿಯ ನಂತರ ಸಲ್ಲಿಕೆಯಾಗುವ ಅಥವಾ ಬೇರೆ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ

 

 

[t4b-ticker]

You May Also Like

More From Author

+ There are no comments

Add yours