ಬೈಕ್ ನಲ್ಲಿ ಸೇತುವೆ ದಾಟುವಾಗ ಇಬ್ಬರು ಯುವಕರು ನೀರು ಪಾಲು

 

 

 

 

ಚಳ್ಳಕೆರೆ: ತಾಲೂಕಿನ ಕೊರ್ಲಕುಂಟೆ ಬಳಿ ಸೇತುವೆ ದಾಟುವ ವೇಳೆ ಬೈಕ್ ನಲ್ಲಿ  ತೆರಳುವಾಗ ಇಬ್ಬರು ನೀರುಪಾಲಾಗಿರುವ ಘಟನೆ ಸೋಮುವಾರ ರಾತ್ರಿ ನಡದಿದೆ.

 

 

ಕೊರ್ಲಕುಂಟೆ ಗ್ರಾಮದ ಬಳಿ  ಸೋಮವಾರ ರಾತ್ರಿ ಬೈಕ್ ನಲ್ಲಿ ಮೂರು ಜನ ಗ್ರಾಮಕ್ಕೆ ತೆರಳುತ್ತಿದ್ದರು.  ಈ ವೇಳೆ ಸೇತುವೆ ಬಳಿ ಹರಿಯುವ ನೀರು ದಾಟುತ್ತಿರುವಾಗ ‌ಬೈಕ್ ಸಮೇತ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.ನೀರಿನಲ್ಲಿ ಕೊಚ್ಚಿಕೊಂಡು ಹೋದವರನ್ನು ಕೊರ್ಲಕುಂಟೆ ಗ್ರಾಮದ ಕುಮಾರ್ (30)ಹಾಗೂ ಒಬಳೇಶ (30) ಎಂದು ಗುರುತಿಸಲಾಗಿದ್ದು.  ಬೈಕಿನಲ್ಲಿದ್ದ ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಪರಶುರಾಮಪುರ ಪಿಎಸ್ಐ.ಕಾಂತರಾಜ್ ,ಅಗ್ನಿಶಾಮಕ ದಳದ ಅಧಿಕಾರಿ ಆರ್ ಐ. ಮೊಹನ್ ಸೇರಿಂದತೆ ಗ್ರಾಮಸ್ಥರು ಸ್ಥಳಕ್ಕೆ‌ ಭೇಟಿ ನೀಡಿದ್ದು ನೀರಿನಲ್ಲಿ ಕೊಚ್ಚ ಹೋದ ವ್ಯಕ್ತಿ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಕೊಚ್ಚಿ ಹೊದ ಬೈಕ್ ಸಿಕ್ಕಿದೆ ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours