ರಾಜ್ಯ ಸುದ್ದಿ:27: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮುರುಘಾ ಶರಣರ ವಿರುದ್ದ ಪ್ರಕರಣ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಈ ಬಗ್ಗೆ 5-6 ತಿಂಗಳ ಹಿಂದೆ ಹಲವಾರು ಚರ್ಚೆ ನಡೆದಿವೆ. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕಿತ್ತು. ಇದು ಧಾರ್ಮಿಕ ಕ್ಷೇತ್ರದ ಮೇಲೆ ಬೇರೆ ಪರಿಣಾಮ ಬೀರಬಾರದು. ಈಗಾಗಲೇ ಒಂದು ಬಾರಿ ಹೊಸನಗರ ಶ್ರೀಗಳ ಘಟನೆ ನಡೆದಿತ್ತು. ನಮ್ಮ ನಮ್ಮ ಭಾವನೆಗಳಿಗೆ ಧಕ್ಕೆಯಾಗಬಾರದು. ಕಾನೂನು ಬಾಹಿರವಾಗಿ ನಡೆದಿದ್ರೆ ಸರ್ಕಾರ ತೀರ್ಮಾನಕ್ಕೆ ಬರಬೇಕು ಎಂದು ಹೇಳಿಕೆ ನೀಡಿದ್ದಾರೆ.
[t4b-ticker]
+ There are no comments
Add yours