ಚಿತ್ರದುರ್ಗ: ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಯಾವ ರೀತಿ ಅವಕಾಶ ಬರುತ್ತದೋ ಅದಕ್ಕೆ ನಾನು ಕೂಡ ಹೊಂದಿಕೊಂಡು ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷರವರ ಹುಟ್ಟುಹಬ್ಬ ಆಚರಣೆಯಲ್ಲಿ ಶನಿವಾರ ಭಾಗವಹಿಸಿ ಶುಭ ಹಾರೈಸಿ ನಂತರ ಮಾತನಾಡಿದ ಕೆ.ಸಿ.ವೀರೇಂದ್ರಪಪ್ಪಿ ಎಲ್ಲಾ ಕಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳಿಂದ ಒತ್ತಡ ಹೆಚ್ಚುತ್ತಿದೆ. ಮಹಮದ್ ಅಹಮದ್ ಪಾಷರವರ ಜೊತೆ ಪರಸ್ಪರ ವಿಚಾರ ವಿನಮಯ ಮಾಡಿಕೊಂಡು ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸುತ್ತೇನೆ. ಎಲ್ಲರ ಸಹಕಾರ ಆಶೀರ್ವಾದ ಬೇಕು. 2023 ರ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಯಶಾಲಿಯನ್ನಾಗಿಸಿದರೆ ನಿಮ್ಮ ಋಣ ತೀರಿಸುತ್ತೇನೆಂದು ಭರವಸೆ ನೀಡಿದರು.
ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದ ಮಹಮದ್ ಅಹಮದ್ ಪಾಷ ಚಿತ್ರದುರ್ಗ ವಿಧಾನಸಭೆಗೆ ಉತ್ಸಾಹದಿಂದ ಕೆಲಸ ಮಾಡುವ ಹೊಸ ಮುಖ ಬೇಕಾಗಿದೆ. ಹಾಗೆ ನೋಡಿದರೆ ಸದ್ಯಕ್ಕೆ ಕೆ.ಸಿ.ವೀರೇಂದ್ರಪಪ್ಪಿಯನ್ನು ಬಿಟ್ಟರೆ ಬೇರೆ ಯಾರೂ ಕಣ್ಣಿಗೆ ಕಾಣುತ್ತಿಲ್ಲ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿಮಗೆ ಅವಕಾಶ ಕೊಡುವಂತೆ ಕೆಲವು ಮುಖಂಡರುಗಳ ಬಳಿ ಚರ್ಚಿಸಿದ್ದೇನೆ. ಯಾವುದೇ ಜಾತಿ ಧರ್ಮವಿಲ್ಲದೆ ಎಲ್ಲರೂ ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ. ನಿಮ್ಮ ಜೊತೆಯಲ್ಲಿ ನಾವಿರುತ್ತೇವೆಂದು ಆಹ್ವಾನಿಸಿದರು.
ನಗರಸಭೆ ಮಾಜಿ ಸದಸ್ಯ ಶ್ರೀರಾಮ, ಹೆಚ್.ಶಬ್ಬೀರ್ಭಾಷ, ಸೈಯದ್ ಇಸ್ಮಾಯಿಲ್, ಸೈಯದ್ ಖುದ್ದೂಸ್, ರಹಮತ್ವುಲ್ಲಾ, ಜಮೀರ್, ಸೈಯದ್ ಸೈಫುಲ್ಲಾ ಸೇರಿದಂತೆ ಮಹಮದ್ ಅಹಮದ್ ಪಾಷರವರ ನೂರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
+ There are no comments
Add yours