ನಾಳೆ ಕೋಟೆ ನಾಡಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ಆಗಮನ

 

 

 

 

ಚಿತ್ರದುರ್ಗ: ನಗರದ ವಿದ್ಯಾನಗರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶ್ರೀ ಅಹೋಬಲ ಟಿವಿಎಸ್ ಹಾಗೂ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಗಸ್ಟ್ 28 ರಂದು ಭಾನುವಾರ ಮಧ್ಯಾಹ್ನ 3-30 ಗಂಟೆಗೆ ಹಮ್ಮಿಕೊಂಡಿದ್ದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವೃಕ್ಷ ಮಾತೇ ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರತಾಪ್ ರೆಡ್ಡಿ , ಅತಿಥಿಗಳಾಗಿ ಗಾಯತ್ರಿ ಶಿವರಾಂ ,ನಗರಸಭೆ ಸದಸ್ಯ ಸುರೇಶ್, ಗ್ರಾಮ ಪಂಚಾಯತಿ ಸದಸ್ಯ ಆರ್‌.ನಿರಂಜನ್ , ರಮೇಶ್ ಮೋತ್ಕೂರ್, ಸುಲೋಚನ ಎಂ.ಸಿ.ಶಂಕರ್, ವನಜಾಕ್ಷಿ ಅನಂತ್ ರಾಜ್ ಮತ್ತು ವಿದ್ಯಾನಗರ  ಸಾರ್ವಜನಿಕರು ಆಗಮಿಸಲಿದ್ದಾರೆ ಎಂದು ಶ್ರೀಅಹೋಬಲ ಟಿವಿಎಸ್ ಮಾಲೀಕ ಅರುಣ್ ತಿಳಿಸಿದ್ದಾರೆ.‌

 

 

[t4b-ticker]

You May Also Like

More From Author

+ There are no comments

Add yours