ಚಿತ್ರದುರ್ಗ: ತಾಲೂಕಿನ ಸೀಬಾರ ಬಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ- ಕಾರು ನಡುವೆ ಅಪಘಾತ ನಡೆದಿದ್ದು ಸ್ಥಳದಲ್ಲೇ ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. . ಚಿತ್ರದುರ್ಗ ಹೊರ ವಲಯದ ಸೀಬಾರ ಸಮೀಪದ ಹೊಸ ಹೈವೆಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನೂ ಈ ಘಟನೆಯಲ್ಲಿ ಮೃತಪಟ್ಟವರ ಮಾಹಿತಿಯನ್ನು ಪೋಲಿಸರು ಕಲೆ ಹಾಕುತ್ತಿದ್ದು ಯಾವುದೇ ಮಾಹಿತಿ ಇನ್ನು ದೃಡಪಟ್ಟಿಲ್ಲ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
[t4b-ticker]
+ There are no comments
Add yours