ಚಿತ್ರದುರ್ಗ: ತಾಲೂಕಿನ ಮೇದೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ನಿರ್ಮಾಣ ಮಾಡುತ್ತಿರುವ ಮೂರು ರಸ್ತೆಗಳಿಗೆ 30 ಲಕ್ಷ ಅನುದಾನ ನೀಡಿದ್ದೇನೆ. ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು. ಹಣದ ಕೊರತೆಯಾದರೆ ಹೆಚ್ಚುವರಿ ಹಣದ ವ್ಯವಸ್ಥೆ ಮಾಡುತ್ತೇನೆ. ಆದರೆ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಲ್ಲ ಎಂದರು. ಮೇದೇಹಳ್ಳಿ ಗ್ರಾಮದಲ್ಲಿ ಕಳೆದ ಬಾರಿ ಸಹ ಅನುದಾನ ನೀಡಿ ಸಿ.ಸಿ.ರಸ್ತೆಗಳನ್ನು ಮಾಡಲಾಗಿದೆ. ಇನ್ನುಳಿದ ರಸ್ತೆಗಳಿಗೆ ಸಹ ಮುಂದಿನ ದಿನಗಳಲ್ಲಿ ಹಣ ನೀಡಲಾಗುವುದು. ರಸ್ತೆಗಳನ್ನು ಮಾಡುವ ಜವಬ್ದಾರಿ ನನ್ನದು ಚರಂಡಿಯನ್ನು , ಬೀದಿ ದೀಪ ಸೇರಿ ಸ್ಥಳೀಯ ಸಮಸ್ಯೆಗಳನ್ನು ಗ್ರಾಮ ಪಂಚಾಯತಿ ಸದಸ್ಯರ ಗಮನಕ್ಕೆ ತಂದು ಮಾಡಿಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಜಯರಾಮ್ ರೆಡ್ಡಿ,ಚಂದ್ರಕುಮಾರ್, ನಿಂಗಪ್ಪ ,ದುಗ್ಗಣ್ಣ, ಶ್ರೀನಿವಾಸ್ ಮತ್ತು ಪಿಡಿಓ ಸಂತೋಷ್ ಕುಮಾರ್ ಹಾಗೂ ಮುಖಂಡರು ಇದ್ದರು.
+ There are no comments
Add yours