Tuesday, October 22 2024

ಮೀನು ಹಿಡಿಯಲು ಹೋಗಿ ತಂದೆ ಮಗ ನೀರು ಪಾಲು

 

 

 

 

ಕಲಬುರಗಿ,ಆ.3-ಮೀನು ಹಿಡಿಯಲು ಹೋಗಿ ತಂದೆ ಮಗ ಸಾವಿಗೀಡಾದ ಘಟನೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ನಡೆದಿದೆ.
ತಂದೆ ರಾಜು ತಿಮ್ಮಯ್ಯ (45) ಮತ್ತು ಮಗ ಮಹೇಶ್ (12) ಮೃತರು.
ಕಳೆದ 15 ದಿನಗಳಿಂದ ಚಿಂಚೋಳಿ ಸೇರಿದಂತೆ ಚಂದ್ರಪಳ್ಳಿ ಜಲಾಶಯ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿದ್ದು, ಜಲಾಶಯ ಉಕ್ಕಿ ಹರಿಯುತ್ತಿದೆ. ಹೀಗಿದ್ದರೂ ತಂದೆ ಮಗ ನಿನ್ನೆ 10.30ರ ಸುಮಾರಿಗೆ ಮೀನು ಹಿಡಿಯಲು ಜಲಾಶಯಕ್ಕೆ ತೆರಳಿದ್ದರು. ಮೀನು ಹಿಡಿಯುತ್ತಾ ಆಯತಪ್ಪಿ ಮಗ ನೀರಿನಲ್ಲಿ ಮುಳುಗಿದ್ದು, ನಂತರ ತಂದೆಯೂ ಜಲಾಶಯದ ಆಳದಲ್ಲಿ ಸಿಲುಕಿ ಮೇಲೆ ಬರಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ.
ಮೃತರು ಚಂದ್ರಂಪಳ್ಳಿ ಗ್ರಾಮದವರಾಗಿದ್ದು, ಮೃತದೇಹಗಳ ಪತ್ತೆಗಾಗಿ ಚಿಂಚೋಳಿ ತಹಶೀಲ್ದಾರ ಅಂಜುಮ್ ತಬಸ್ಸುಮ್ ಅವರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆಯವರೆಗೂ ಶೋಧಕಾರ್ಯ ನಡೆಸಲಾಗಿತ್ತು. ಶವಗಳು ಪತ್ತೆಯಾಗದೇ ಇದುದ್ದರಿಂದ ಇಂದು ಮುಂಜಾನೆ ಮತ್ತೆ ಶೋಧಕಾರ್ಯ ನಡೆಸಿ ತಂದೆ-ಮಗನ ಶವಗಳನ್ನು ಹೊರ ತೆಗೆಯಲಾಗಿದೆ.
ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

[t4b-ticker]

You May Also Like

More From Author

+ There are no comments

Add yours

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ವೇಳೆ ರಾಹುಲ್ ಬಂಧನಕ್ಕೆ ಜಿಲ್ಲಾ ಕಾಂಗ್ರೆಸ್ ಖಂಡನೆ

ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಪವರ್ ಕಟ್

[t4b-ticker]