ಆಗಸ್ಟ್ 04ರಂದು ನೇರ ನೇಮಕಾತಿ ಸಂದರ್ಶನ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಆಗಸ್ಟ್ 02:
ಬೆಂಗಳೂರಿನ ರಾಜರಾಜೇಶ್ವರಿ ನಗರದ ವಿ.ಎಂ.ಎ.ಪಿ.ಎಸ್. ಟೆಕ್ ಇಂಡಿಯಾ ಪ್ರೈ.ಲಿ ಅವರು ತಮ್ಮಲ್ಲಿ ಖಾಲಿಯಿರುವ 70 ಹುದ್ದೆಗಳನ್ನು ಭರ್ತಿ ಮಾಡಲು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಗಸ್ಟ್ 4ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಹತೆ: ಡಿಪ್ಲೋಮಾದಲ್ಲಿ ಎಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್‍ಗೆ ಆದ್ಯತೆ ನೀಡಲಾಗುವುದು. ಬಿ.ಇ. ಇಂಜಿನಿಯರಿಂಗ್‍ನಲ್ಲಿ ಸಿವಿಲ್ ಮತ್ತು ಮೆಕಾನಿಕಲ್ ಪದವಿ ಪಡೆದಿರಬೇಕು. 18 ರಿಂದ 30 ವರ್ಷದೊಳಗಿನ ಯುವಕ, ಯುವತಿಯರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ರೂ.12000 ದಿಂದ 20000 ವೇತನ ನೀಡಲಾಗುವುದು.
ನೇರ ನೇಮಕಾತಿ ಸಂದರ್ಶನದಲ್ಲಿ ಉದ್ಯೋಗದಾತರನ್ನು ಭೇಟಿಯಾಗುವ ಮೊದಲು ಹೆಸರನ್ನು ನೋಂಸರನ್ನು ನೋಂದಾಯಿಸಿಕೊಳ್ಳಬೇಕು. ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು, ಉದ್ಯೋಗವಕಾಶ ಪಡೆದುಕೊಳ್ಳಬಹುದು. ನೇರ ನೇಮಕಾತಿ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಫೀ ಅಥವಾ ಶುಲ್ಕ ನೀಡುವ ಅವಶ್ಯಕತೆ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ಬಯೋಡಾಟಾ, ಅಂಕಪಟ್ಟಿ ನಕಲು, 2 ಫೋಟೋ, ಆಧಾರ್ ಕಾರ್ಡ್ ದಾಖಲೆಗಳನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ ಸಂಖ್ಯೆ  7022459064, 8105619020, 9945587060ಗೆ ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours