ಚಿತ್ರದುರ್ಗ: ನಾರ್ತ್ ಕರ್ನಾಟಕ( North Karnataka) ದಲ್ಲಿ ಎಲ್ಲಾ ಟಿವಿಎಸ್ ಕಂಪನಿಗಳಿಗೆ ಪೈಪೋಟಿ ನೀಡಿ ಅತಿ ಹೆಚ್ಚು ಬೈಕ್ ಮಾರಾಟ ಮಾಡುವ ಮೂಲಕ ಚಿತ್ರದುರ್ಗದ ಶ್ರೀಅಹೋಬಲ ಟಿವಿಎಸ್ ಕಂಪನಿ ಮೊದಲನೇ ಸ್ಥಾನವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಾರ್ತ್ ಕರ್ನಾಟಕದ ಷೇರು ಮಾರುಕಟ್ಟೆಯಲ್ಲಿ ಪ್ರತಿ ಹಂತದಲ್ಲೂ ಸಹ ಹೆಚ್ಚು ವಾಹನಗಳ ನೊಂದಣಿ ಮಾಡಿಸುವ ಮೂಲಕ ಮಾರುಕಟ್ಟೆ ಷೇರು ಹೆಚ್ಚುಗೊಳಿಸುತ್ತ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಚಿತ್ರದುರ್ಗ ನಗರದಲ್ಲಿ ಕಳೆದ ಏಳು ತಿಂಗಳಲ್ಲಿ ಹೆಚ್ಚು ಜನಪ್ರಿಯಗೊಂಡಿರುವ ಶ್ರೀ ಅಹೋಬಲ ಟಿವಿಎಸ್ ಕಂಪನಿಯು ನಾರ್ತ್ ಕರ್ನಾಟಕದಲ್ಲಿ ಟಿವಿಎಸ್ ಕಂಪನಿಗಳಿಗೆ ಪೈಪೋಟಿ ನೀಡಿ ಕಂಪನಿಯ ಮಾರುಕಟ್ಟೆಯ ಪ್ರತಿಷ್ಠಿತ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ಚಿತ್ರದುರ್ಗ ನಗರದ ಅಹೋಬಲ ಟಿವಿಎಸ್ ಕಂಪನಿ ಮತ್ತಷ್ಟು ಜನಪ್ರಿಯತೆ ಬಂದಿದೆ ಎಂದು ವಿಶ್ಲೇಷಣೆ ಮಾಡಬಹುದಾಗಿದೆ.
ಪ್ರಶಸ್ತಿ ಪಡೆದು ನ್ಯೂಸ್ 19 ಕನ್ನಡ ಜೊತೆ ಮಾತನಾಡಿದ ಶ್ರೀ ಅಹೋಬಲ ಟಿವಿಎಸ್ ಕಂಪನಿ ಮಾಲೀಕ ಅರುಣ್ ಅವರು ಪ್ರತಿಯೊಬ್ಬರು ಶ್ರಮದಿಂದ ಯಾವ ಕೆಲಸ ಮಾಡುತ್ತಾರೋ ಅವರಿಗೆ ಯಶಸ್ವಿ ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು. ಚಿತ್ರದುರ್ಗದ ಜನತೆ ಪ್ರೀತಿಯಿಂದ ಹರಸಿ ಹಾರೈಸಿದ್ದರಿಂದ ನಾನು ಈ ಸಾಧನೆ ಮಾಡಲಾಯಿತು. ಈ ಸಾಧನೆಯಲ್ಲಿ ನಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕರ ಶ್ರಮವಿದೆ ಎಂದರು. ಜನರು ಪ್ರೀತಿ ವಿಶ್ವಾಸ ಹೀಗೆ ಮುಂದುವರೆದು ನನ್ನನ್ನು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಏರುವ ಹಂಬಲ ನನಗಿದ್ದು ಚಿತ್ರದುರ್ಗ ಜನತೆಯ ಆಶೀರ್ವಾದ ನನಗಿರಲಿ ಎಂದು ತಿಳಿಸಿದರು.
+ There are no comments
Add yours