ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದ ಅರುಣ್ ಕುಮಾರ್ ಅವರನ್ನು ಆರ್ಎಸ್ಎಸ್ಗೆ ಮರು ನಿಯುಕ್ತಿ ಮಾಡಿದ್ದು ಆ ಹುದ್ದೆಗೆ ಆರ್ಎಸ್ಎಸ್ನ ತುಮಕೂರು ವಿಭಾಗದ ಪ್ರಚಾರಕ ರಾಜೇಶ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ನಗರದ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಮಂಗಳವಾರ ನಡೆದ ಆರ್ಎಸ್ಎಸ್ನ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಮೂಲಕ ಕರ್ನಾಟಕ ಆರ್ಎಸ್ಎಸ್ ನಲ್ಲಿ ಐವರು ಪ್ರಚಾರಕರ ಜವಾಬ್ದಾರಿಯನ್ನು ಬದಲಿಸಲಾಗಿದ್ದು ಅರುಣ್ಕುಮಾರ್ ಅವರನ್ನು ಆರು ವರ್ಷಗಳ ಹಿಂದೆ ಬಿಜೆಪಿ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು.
ರಾಜಕೀಯ ಕ್ಷೇತ್ರಕ್ಕೆ (ಬಿಜೆಪಿ) ನಿಯೋಜನೆಗೊಂಡಿರುವ ರಾಜೇಶ್ ಅವರು ದಕ್ಷಿಣ ಕನ್ನಡದವರು. ಮೈಸೂರು ಜಿಲ್ಲಾ ಆರ್ಎಸ್ಎಸ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗದ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.
2010 ರಿಂದ ಸಂಘ ಪರಿವಾರದ ಪೂರ್ಣವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ
[t4b-ticker]
+ There are no comments
Add yours