ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯ ಮುಟ್ಟಿಸಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಒದಗಿಸುವ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿರಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಶನಿವಾರ ರಾಮಜೋಗಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ   ಕಡೆ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ  ಭೇಟಿ ನೀಡಿ  ಗ್ರಾಮ ಪಂಚಾಯತಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ  ಸಮಾಜದಲ್ಲಿರುವಂತಹ ಜನರನ್ನು   ಸೌಲಭ್ಯ ವಂಚಿತರ ಹಿತ ಕಾಯುವ ಕೆಲಸವನ್ನು ಅಧಿಕಾರಿಗಳು ಮತ್ತು ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಮಾಡಬೇಕಿದೆ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ಕಾರ್ಯಕ್ರಮ ಸೌಲಭ್ಯ ವಂಚಿತರಿಗೆ ಸಂಜೀವಿನಿ ಅಂತ ವರದಾನವಾಗಿದ್ದು  ಇದನ್ನು ಉಪಯೋಗಿಸಿಕೊಂಡು ಗ್ರಾಮದಲ್ಲಿರುವಂತಹ ಎಲ್ಲಾ ಸೌಲಭ್ಯ ವಂಚಿತರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕೆಂದು ಕರೆ ನೀಡಿದರು.

 

 

ಶಾಸಕರ ಅಧ್ಯಕ್ಷತೆಯಲ್ಲಿ  ಕಾರ್ಯಕ್ರಮ  ಜರುಗಲಿದ್ದು ಈ  ಅಂದಿನ ಕಾರ್ಯಕ್ರಮದಲ್ಲಿ  ಶಾಸಕರನ್ನು ಜಾನಪದ ಶೈಲಿಯ ಜೋಡಿ ಎತ್ತಿನ ಗಾಡಿಯಲ್ಲಿ ವಿವಿಧ ಕಲಾತಂಡದಗಳೊಂದಿಗೆ ಬರಮಾಡಿಕೊಂಡು ಹಿಂದುಳಿದ ಒಂದು ಕಾಲೋನಿಯಲ್ಲಿ ಮನೆ ಮನೆಯನ್ನು ವೀಕ್ಷಣೆ ಮಾಡಿ ಅವರ ಕುಂದು ಕೊರತೆಯನ್ನು ವಿಚಾರಿಸಲಿದ್ದಾರೆ ತದ ನಂತರ ಇಡೀ ಗ್ರಾಮದಲ್ಲಿ ಪೌತಿಕಾತೆ ಪೋಡಿ ದಾರಿ ವಿವಾದ ಮುಂತಾದ ಇನ್ನಿತರ ಕಂದಾಯ ಇಲಾಖೆಗೆ ಸಂಬಂಧಿಸಿದ ಉಳಿದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅಂದಿನ ದಿನ ನಮ್ಮ ಗಮನಕ್ಕೆ ತಂದಲ್ಲಿ ಬೇರೆ ಇಲಾಖೆಯ ವತಿಯಿಂದ ಪರಿಹರಿಸಲಾಗುವುದು ಎಂದರು.

ರಾಮಜೋಗಿಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತ ಐದು ಗ್ರಾಮಗಳನ್ನು ಕೂಡ ಮೇಲ್ಕಂಡ ಸಮಸ್ಯೆಗಳಿಂದ ಮುಕ್ತಗೊಳಿಸಲಾಗಿದೆ. ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ರಾಮಜೊಗಿ ಹಳ್ಳಿ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours