ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 11:
ಚಿತ್ರದುರ್ಗ ತಾಲ್ಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆ ಜುಲೈ 09 ರಂದು ನಡೆದಿದ್ದು, ಚುನಾವಣೆಯಲ್ಲಿ 07 ಜನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ಕೊಳಹಾಳ್ ಸರ್ಕಾರಿ ಪ್ರೌಢಶಾಲೆಯ ಬಸವರಾಜಪ್ಪ ಟಿ.ಹೆಚ್, ಕಾರ್ಯದರ್ಶಿಯಾಗಿ ಭರಮಸಾಗರದ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಾಗಭೂಷಣ್ ಹೆಚ್.ಆರ್, ಕೋಶಾಧ್ಯಕ್ಷರಾಗಿ ಅಳಗವಾಡಿ ಎಸ್.ಎಸ್.ಎಂ.ಜಿ.ಗ್ರಾಮಾಂತರ ಪ್ರೌಢಶಾಲೆಯ ಸದಾನಂದ ಪಿ, ರಾಜ್ಯಪರಿಷತ್ ಸದಸ್ಯರಾಗಿ ಕಡನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಭೀಮಪ್ಪ ಮಾದರ, ಸಂಘಟನಾ ಕಾರ್ಯದರ್ಶಿಯಾಗಿ ಚಿತ್ರದುರ್ಗದ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆಯ ಶ್ರೀನಿವಾಸ್ ಟಿ, ಉಪಾಧ್ಯಕ್ಷರಾಗಿ ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಂಜುನಾಥ್ ಡಿ., ಸಹ ಕಾರ್ಯದರ್ಶಿಯಾಗಿ ಮುದ್ದಾಪುರ ಸರ್ಕಾರಿ ಪ್ರೌಢಶಾಲೆಯ ಗಾಯತ್ರಿ.ಬಿ ಅವರು ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ ತಾಲ್ಲೂಕು ಚುನಾವಣಾಧಿಕಾರಿ ತಿಳಿಸಿದ್ದಾರೆ.
[t4b-ticker]
+ There are no comments
Add yours