ವಿಕ್ಷಕರ ಮುಂದೆಯೇ ಚಿಕ್ಕ ಎಮ್ಮಿಗನೂರಿನಲ್ಲಿ ಕೈ ಕಾರ್ಯಕರ್ತರ ನಡುವೆ ಘರ್ಷಣೆ

 

 

 

 

ಚಿತ್ರದುರ್ಗ: ಜಿಲ್ಲೆಯ  ಹೊಳಲ್ಕೆರೆ ತಾಲೂಕಿನ ಚಿಕ್ಕ ಎಮ್ಮಿಗನೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಘರ್ಷಣೆ  ನಡೆದಿದೆ. ಮಾಜಿ ಸಚಿವ ಹೆಚ್.ಆಂಜನೇಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಘು ಬೆಂಬಲಿಗರ ನಡುವೆ ವೀಕ್ಷಕರಾಗಿ ಕ್ಷೇತ್ರಕ್ಕೆ ಆಗಮಿಸಿದ್ದ  ಕಾಂಗ್ರೆಸ್  ನಾಯಕ ಸಾಸಲು ಸತೀಶ್ ಎದುರು ಕಾರ್ಯಕರ್ತರು  ಗಲಾಟೆ ಮಾಡಿಕೊಂಡಿದ್ದಾರೆ. ಬೆಂಬಲಿಗರು ಪರಸ್ಪರ ಘೋಷಣೆ ಕೂಗುವಾಗ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಆಂಜನೇಯ ಮತ್ತು ಸವಿತಾ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದು ಈ ಗಲಾಟೆ ಕಾರಣ ಎಂದು ತಿಳಿದಿದೆ. ಸದ್ದಿಲ್ಲದೆ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ  ಪತಿ ರಘು ಕ್ಷೇತ್ರದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿದ್ದು ಟಿಕೆಟ್ ನಮಗೆ ಎಂಬ ಹುಮ್ಮಸಿನಲ್ಲಿದ್ದಾರೆ. ಆದರೆ ಮಾಜಿ ಸಚಿವ ಹೆಚ್.ಆಂಜನೇಯ ಅವರು ಸಹ ಕ್ಷೇತ್ರದಲ್ಲಿ ಕಾಂಗ್ರೆಸ್  ಸಂಘಟನೆಗೆ ಮುಂದಾಗಿದ್ದು  ಮುಂದೆ ಯಾರಿಗೆ ಟಿಕೆಟ್ ಒಲಿಯಲಿದೆ ಎಂಬುದು ಕಾದು ನೋಡಬೇಕಿದೆ.

 

 

[t4b-ticker]

You May Also Like

More From Author

+ There are no comments

Add yours