ಚಳ್ಳಕೆರೆ-20 : ಶಿಕ್ಷಣದಿಂದ ಮಾತ್ರ ಬದುಕಿನ ಎಲ್ಲಾ ಬದಲಾವಣೆಯತ್ತ ನಡೆಯಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಪಾವಗಡ ರಸ್ತೆಯಲ್ಲಿ ಐಟಿಐ ಕಾಲೇಜು ಆವರಣದಲ್ಲಿ ನಿರ್ಮಾಣವಾದ ನೂತನ ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲಾಗಿರುವಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಟಿಟಿಎಲ್ ಸಹಯೋಗದೊಂದಿಗೆ ಕಾಲೇಜನ್ನು ಉನ್ನತೀಕರಿಸಲಾಗಿದೆ.
ಐಟಿಐ ಕಾಲೇಜುಗಳನ್ನು ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲು 150 ಕೇಂದ್ರಗಳಿಗೆ 4,635 ಕೋಟಿ ರೂ. ಕೇಂದ್ರ ಸರ್ಕಾರ, ಟಾಟಾ ಟೆಕ್ನಾಲಜಿಸ್ ಹಾಗೂ ಸಂಸ್ಥೆಗಳೊಂದಿಗೆ ಕರ್ನಾಟಕ ಸರ್ಕಾರ ಸುಮಾರು 650 ಕೋಟಿ ರೂ. ವಿನಿಯೋಗಿಸಿದೆ. ಅದರ ಜೊತೆಗೆ ಸಂಸ್ಥೆಯವರು ಬೇರೆ ಬೇರೆ ಸ್ಥಳಗಳಲ್ಲಿ ತಾಂತ್ರಿಕ ಕೇಂದ್ರಗಳಿಗೆ 4080 ಕೋಟಿ ರೂ ವೆಚ್ಚ ಮಾಡಿದ್ದಾರೆ. 150 ಕೇಂದ್ರಗಳಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಭರಮಸಾಗರ, ಹೊಸದುರ್ಗ ಕೂಡ ಸೇರಿದೆ ಎಂದರು.
ಚಳ್ಳಕೆರೆಯಲ್ಲಿ 1998 ರಲ್ಲಿ ಐಟಿಐ ಪ್ರಾರಂಭವಾಗಿ, ಪುನಃ 2016ರಲ್ಲಿ ನಾನು ಶಾಸಕನಾದ ಮೇಲೆ ಹೊಸ ಕಟ್ಟಡ ನಿರ್ಮಾಣ ಮಾಡಲಾಯಿತು. ಇದೀಗ ಇದಕ್ಕೆ ಪೂರಕವಾಗಿ 2 ಕಟ್ಟಡ ಲೋಕಾರ್ಪಣೆಗೊಂಡಿದೆ. ಕಾಲೇಜನ್ನು ಉನ್ನತೀಕರಿಸಿರುವ ಸಂದರ್ಭದಲ್ಲಿ ಹಳೆಯ 5 ಕೋರ್ಸ್ ಗಳ ಜೊತೆಗೆ 6 ಕೋರ್ಸ್ ಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
+ There are no comments
Add yours