ಚಳ್ಳಕೆರೆ-19 ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷದ ಮಹಾನೀಯರನ್ನು ಇಂದುದೇಶ ನೆನೆಯುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶಾಸಕರ ಭವನದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರವರ 52ನೇ ಹುಟ್ಟುಹಬ್ಬವನ್ನು ಶಾಸಕರ ಭವನದಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಕಾಂಗ್ರೆಸ್ ಪಕ್ಷ ದೇಶಸ ಬಡಜನರ ಹಿತಕಾಯುವ ಪಕ್ಷ.ಇಂತಹ ಪಕ್ಷದ ಮೇಲೆ ಇಡಿ ಹಾಗೂ ಇತರೆ ಪಕ್ಷದ ಮುಖಂಡರು ಇಲ್ಲಸಲ್ಲದ ಆರೋಪ ಮಾಡಿ ಆರೋಪದಲ್ಲಿ ಸಿಲುಕಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ, ಮುಖಂಡರಾದ ಟಿ. ಪ್ರಭುದವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ,ನಗರಸಭಾ ಸದಸ್ಯರುಗಳು, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಮಾಜಿ ಅಧ್ಯಕ್ಷರಾದ ಡಿ ರಾಜಪ್ಪ ಕರಿಕೆರೆ,ಎಸ್ ಟಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ರಾಜ ವೈ ಸುಮನ್ ಪಟೇಲ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ವಿಶ್ವನಾಥ್,ಸಿಪಾಯಿ ಮಂಜುನಾಥ ಕಾಟಪ್ಪನಹಟ್ಟಿ,ಗುಂಡಪ್ಪರ ದರ್ಶನ್ , ಪಾಪಣ್ಣ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವರಾಜಕುಮಾರ, ಗ್ರಾಮ ಪಂಚಾಯತಿ ಸದಸ್ಯರು ಮೀರಾಸಾಬಿಹಳ್ಳಿ,ಬಿ ಆನಂದ ರಾಜು ಕಾಮಸಮುದ್ರ, ಭೀಮಣ್ಣ ತ್ಯಾಗರಾಜನಗರ ಚಳ್ಳಕೆರೆ, ಸೈಫುಲ್ಲಾ ಹಾಗೂ ಸರ್ಕಾರಿ ಆಸ್ಪತ್ರೆ, ಕಿವುಡ ಮುತ್ತು ಮೂಗರ ಶಾಲೆ, ಶ್ರೀ ಬನಶ್ರೀ ವೃದ್ಧಾಶ್ರಮಕ್ಕೆ ಯುವ ಕಾಂಗ್ರೆಸ್ ಮಿತ್ರರು ಭೇಟಿ ಮಾಡಿ ಇವರಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.
+ There are no comments
Add yours