ಚಳ್ಳಕೆರೆ-19 ಧಾರ್ಮಿಕ ಕೇಂದ್ರಗಳು ಮನಸಿಗೆ ಶಾಂತಿ ನೀಡುವ ಕೇಂದ್ರಗಳಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ನರಹರಿ ನಗರದಲ್ಲಿ
ಶ್ರೀ ನರಹರೇಶ್ವರ ದೇವಾಲಯ ಗೋಪುರ ಕಲಶ ಪ್ರತಿಷ್ಠಾನಾ, ಪರಮಪೂಜ್ಯ ಸಿಂಹಾದ್ರಿ ಸದ್ಗುರು ಸ್ವಾಮಿಗಳ 102 ನೇ ಜನ್ಮ ದಿನೋತ್ಸವ ಶ್ರೀ ನರಹರಿ ಸದ್ಗುರು ಪರಂಪರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ದೇವಾಲಯಗಳು ನೊಂದ ಮನಸುಗಳಿಗೆ ಶಾಂತಿ, ನೆಮ್ಮದಿ ನೀಡುತ್ತಿವೆ. ದೇವಸ್ಥಾನ ಜನರನ್ನು ಒಗ್ಗೂಡಿಸು ಕೇಂದ್ರವಲ್ಲದೆ ಮನಸ್ಸಿನ ಭಾವನೆಗಳಿಗೆ ಚೈತನ್ಯ ತುಂಬಲಿವೆ ಎಂದರು.
ಈ ಸಂದರ್ಭದಲ್ಲಿ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು , ಶ್ರೀಮಾತಾ ತ್ಯಾಗಮಯಿ , ರಾಜಾರಾಂ ಸ್ವಾಮಿ, ಬಿ.ಸಿ.ಸಂಜೀವಮೂರ್ತಿ,ಗ್ರಾಮ ಪಂಚಾಯತಿ ಸದಸ್ಯರುಗಳಾದ ಮಂಜುನಾಥ್, ಸತೀಶ್ ಮಾಜಿ ಸದಸ್ಯೆ ಶೈಲಜಾ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours