ಮೊಳಕಾಲ್ಮುರು:
ದಲಿತ ಸಂಘರ್ಷ ಸಮಿತಿ ಮುಖಂಡನ ಕೊಲೆ :-ಡಿಎಸ್ ಎಸ್ ನಿಂದ ಪ್ರತಿಭಟನೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹ ಮೂರ್ತಿ ಎಂಬುವವರನ್ನು ಕೊಲೆ
ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಡಿಎಸ್ ಎಸ್ ನಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದಲೂ ದೀನ ದಲಿತರ ಮೇಲೆ ದಿನೇ ದಿನೇ ದೌರ್ಜನ್ಯ ಕೊಲೆ,ಸುಲಿಗೆ ದಬ್ಬಾಳಿಕೆ ಹೆಚ್ಚುತ್ತಿವೆ.
ಸಂಘಟನೆ ಮಾಡುತ್ತಾ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿದ್ದ ಗುಬ್ಬಿ ತಾಲೂಕಿನ ಡಿಎಸ್ ಎಸ್ ಸಮಿತಿ ಸಂಚಾಲಕರಾದ ನರಸಿಂಹ ಮೂರ್ತಿಯವರನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳಿಸುವಂತಹ ವಿಷಯ.
ಘಟನೆಗೆ ಕಾರಣರಾಗಿರುವ ಕೊಲೆಗೆಡುಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು, ಕೊಲೆಯಾದ ನರಸಿಂಹಮೂರ್ತಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ ಅವರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬೇಡರಹಳ್ಳಿ ಬಸವರೆಡ್ಡಿ ದಲಿತ ಮುಖಂಡರಾದ ಬಿ.ಟಿ ನಾಗಭೂಷಣ್, ಮರ್ಲಹಳ್ಳಿ ಪರಮೇಶಿ, ಅನಿಲ್ ಕುಮಾರ್, ಗಂಗಾಧರ್ ತಿಪ್ಪೇಸ್ವಾಮಿ ಶಿವರಾಜ್ ಉಮೇಶ ಸೇರಿದಂತೆ ಹಲವರಿದ್ದರು.
[t4b-ticker]
+ There are no comments
Add yours