ಉಪ್ಪಾರ ಸಮಾಜದ ಅಭಿವೃದ್ಧಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮುದಾಯ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವೆ: ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ

 

 

 

 

ಚಳ್ಳಕೆರೆ-28 ಉಪ್ಪಾರ ಸಮಾಜದ ಅಭಿವೃದ್ಧಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮುದಾಯ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೀರುವ ಉಪ್ಪಾರ ಅಭಿವೃದ್ಧಿ ನಿಗಮದ (ಸಂಪುಟ ದರ್ಜೆ) ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರರವರ ಸೇವೆ ಅನನ್ಯವೆಂದು ಎಲ್ಐಸಿ ದುಗ್ಗಾವರ ರಂಗಸ್ವಾಮಿ ಬಳಗದ ಅಧ್ಯಕ್ಷ ಎಲ್ಐಸಿ ದುಗ್ಗಾವರ ರಂಗಸ್ವಾಮಿ ತಿಳಿಸಿದರು.
ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿಉಪ್ಪಾರ ಅಭಿವೃದ್ಧಿ ನಿಗಮದ (ಸಂಪುಟ ದರ್ಜೆ) ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರರವರ 36 ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಬ್ರೆಡ್, ಬಿಸ್ಕತ್ ವಿತರಿಸಿ ಮಾತನಾಡಿದರು. ಉಪ್ಪಾರ ಸಮಾಜದ ಏಳಿಗೆಗಾಗಿ ಕಳೆದ ಹತ್ತಾರು ವರ್ಷಗಳಿಂದ ಶ್ರಮಿಸುತ್ತಿರುವ ಗಿರೀಶ್ ರವರ ಪರಿಶ್ರಮಕ್ಕೆ ರಾಜ್ಯದ ಎಲ್ಲಾ ಜನಾಂಗದ ಸ್ವಾಮೀಜಿಗಳ ಬೆಂಬಲದಿಂದ ಸಮಾಜವೂ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ ಅಂತಹ ಮಹಾನ್ ವ್ಯಕ್ತಿ ನೂರಾರು ಕಾಲ ನಂದಾದೀಪದಂತೆ ಬೆಳಗಲಿ ಎಂದು ಹಾರೈಸುವೆ ಎಂದರು.
ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಡಿಎಂಕೆ‌ ರವಿ, ವೀರೇಶ್, ಪಿ.ಜೆ.ರಾಘವೇಂದ್ರ, ಬಾದಿಹಳ್ಳಿ ಮಲ್ಲಿಕಾರ್ಜುನ, ವಿನೋದ್, ರಾಮಾಂಜನೇಯಪ್ಪ, ಸುಧಾಕರ, ಎಂ.ಲಿಂಗರಾಜು, ಬಹುಜನ ಪಾರ್ಟಿಯ ಎನ್.ಪ್ರಕಾಶ್ ಮುಂತಾದವರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours