ಗ್ರಾಮ ದೇವರು ಶ್ರೀವೀರಭದ್ರಸ್ವಾಮಿ ಜಾತ್ರೆ : ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ.
ಚಳ್ಳಕೆರೆ_15 ನಗರದ ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ಜಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಭಾನುವಾರ ನಡೆಯಿತು.
ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಸಂಪನ್ನರಾರು. ಭಾನುವಾರ ಮಧ್ಯಾಹ್ನ 4:00 ಸಮಯಕ್ಕೆ ರಥೋತ್ಸವ ಪ್ರಾರಂಭವಾಯಿತು. ರಥಕ್ಕೆ ಭಾರಿ ಗಾತ್ರದ ಹೂವಿನ ಹಾರಗಳನ್ನು ಭಕ್ತರು ಭವ್ಯ ಮೆರವಣಿಗೆ ಮೂಲಕ ತಂದು ಹಾಕುವ ಭಕ್ತಿ ಮೆರೆದರು. ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ಮಾಡಲಾಯಿತು. ಹರಾಜಿನಲ್ಲಿ ಉದ್ಯಮಿ ಜೆಡಿಎಸ್ ಪಕ್ಷದ ಮುಖಂಡ ಕೆ.ಸಿ. ವೀರೇಂದ್ರ ಪಪ್ಪಿ 15 ಲಕ್ಷಕ್ಕೆ ಪಡೆದರು. ನಂತರ ಸಾವಿರಾರು ಭಕ್ತರ ಜೈಂಕಾರ ದೊಂದಿಗೆ ರಥೋತ್ಸವ ಪ್ರಾರಂಭವಾಗಿ ಪಾದಗಟ್ಟೆಯವರೆಗೆ ಭವ್ಯವಾಗಿ ನಡೆಯಿತು. ಭಕ್ತರು ಬಾಳೆಹಣ್ಣು ಸೂರುಬೆಲ್ಲ ತೋರುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿಕೊಂಡರು.
ಭಾನುವಾರ ಮುಂಜಾನೆ ಶ್ರೀ ಸ್ವಾಮಿಯ ಅಗ್ನಿಕುಂಡ ಕಾರ್ಯಕ್ರಮವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಅಗ್ನಿಕುಂಡ ಹಾಯುವ ಮೂಲಕ ಭಕ್ತರು ತಮ್ಮ ಹರಿಕೆ ಈಡೇರಿಸಿಕೊಂಡರು.
ಜಾತ್ರಾ ಮಹೋತ್ಸವದಲ್ಲಿ ಜೆಡಿಎಸ್ ಮುಖಂಡರಾದ ಎಂ. ರವೀಶ್ ಕುಮಾರ್ ಕೆ.ಸಿ.ವೀರೇಂದ್ರ ಪಪ್ಪಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ ಗೌಡ, ಮಲ್ಲಿಕಾರ್ಜುನ್, ಕವಿತಾ ನಾಯಕಿ, ಪ್ರಮೋದ್, ಶ್ರೀನಿವಾಸ್, ಬಿಜೆಪಿ ಮುಖಂಡರಾದ ರಾಮದಾಸ್, ಜಯರಾಂ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.
+ There are no comments
Add yours