ಚಳ್ಳಕೆರೆ-14 ನಗರದ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿಯ ಭವ್ಯ ರಥೋತ್ಸವ 15ರ ಭಾನುವಾರ ಮಧ್ಯಾಹ್ನ 3.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.
ಭಾನುವಾರ ಮುಂಜಾನೆ 4ಕ್ಕೆ ಅಗ್ನಿಕುಂಡ ಕಾರ್ಯಕ್ರಮವಿರಲಿದ್ದು ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪವಾಸವಿದ್ದು ಅಗ್ನಿಕುಂಡ ಹಾಯುವರು.
ಜಾತ್ರೆಯ ವಿಶೇಷ :- ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿ ಜಾತ್ರೆಯ ವಿಶೇಷವೆಂದರೆ ನಗರದ ಕೆಲ ಕುಟುಂಬಗಳು ಜಾತ್ರೆ ಮುಗಿಯುವ ವರೆಗೂ ಮನೆಗಳಲ್ಲಿ ಮುದ್ದೆ ಮಾಡಲ್ಲ, ಒಲೆ ಮೇಲೆ ಅಂಚು ಇಡೋಲ. ಯಾವುದೇ ಅಂಟುಮುಟ್ಟು ಮಾಡದೇ ಸ್ವಾಮಿಯ ಸರ್ಶನ ಪಡೆಯುವುದು ವಾಡಿಕೆ. ಏಳು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಕರ್ನಾಟಕ ಸೇರಿದಂತೆ ಆಂದ್ರ ಪ್ರದೇಶದಿಂದಲ್ಲೂ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
+ There are no comments
Add yours