13 ಎಕರೆ ಜಮೀನು ತಕ್ಷಣ ಪಂಚಾಯಿತಿಗೆ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸಲು ಗ್ರಾಮ ಲೆಕ್ಕದಿಕಾರಿಗೆ ಸೂಚನೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ತಾಲೂಕಿನ ಆಂಧ್ರದ ಗಡಿ ಭಾಗದ ಗ್ರಾಮವಾದ ದೇವರಹಳ್ಳಿ ಗ್ರಾಮಕ್ಕೆ ಇಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಭೇಟಿ ನೀಡಿ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

 

 

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಲಿ ನಿರ್ಮಾಣಗೊಂಡಿರುವ ಗ್ರಾಮ ಇನ್ನು ಸರ್ವೇ ನಂಬರ್ 1ಹಾಗೂ 7 ರಲ್ಲಿ ಇದ್ದು ಇದುವರೆವಿಗೂ ಪಂಚಾಯಿತಿಯಿಂದ ಅಸೆಸ್ಮೆಂಟ್ ನಂಬರ್ ನಿಗದಿಯಾಗಿಲ್ಲ ಗ್ರಾಮದಲ್ಲಿ 370 ಮನೆಗಳಿದ್ದು ಸರ್ಕಾರದಿಂದ ಅವಕಾಶ ವಂಚಿತರಾಗಿದ್ದು ಸೌಲಭ್ಯ ಕಲ್ಪಿಸಬೇಕಾಗಿದೆ ಕೋರಿದರು. ಸ್ಥಳದಲ್ಲೇ ಇದ್ದಂತಹ ಗ್ರಾಮಲೆಕ್ಕಾಧಿಕಾರಿಗಳು ಮತ್ತು ರಾಜಸ್ವನಿರೀಕ್ಷಕ ರಿಗೆ ಸೂಚನೆ ನೀಡಿದಂತಹ ತಹಶೀಲ್ದಾರ್ ಅವರು 13 ಎಕರೆ ಜಮೀನನ್ನು ತಕ್ಷಣ ಪಂಚಾಯಿತಿಗೆ ಹಸ್ತಾಂತರಿಸಲು ಪ್ರಸ್ತಾವನೆಯನ್ನು ತಕ್ಷಣ ಸಲ್ಲಿಸುವಂತೆ ಸೂಚಸಿದರು. ಹಾಗೂ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚಿನ ವೃದ್ಧರು ಮಹಿಳೆಯರು ಇದ್ದು ತಕ್ಷಣ ಪರಿಶೀಲಿಸಿ ಇವರುಗಳಿಗೆ ನಿಯಮಾವಳಿಯಂತೆ ವಿವಿಧ ವೇತನ ಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಗ್ರಾಮ್ ಪಂಚಾಯ್ತಿ ಸದಸ್ಯ ಮಾರಣ್ಣ ಮತ್ತಿತರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours