ಚಳ್ಳಕೆರೆ: ತ್ರೇತಾ ಯುಗದ ಸೀತೆ ದ್ವಾಪರ ಯುಗದ ದ್ರೌಪದಿ ಹೇಗೆ ಧರ್ಮ ಸಂಸ್ಥಾಪನೆಗೆ ಕಾರಣರಾದರು ಹಾಗೆಯೇ ವಾಸವಿ ಕನ್ಯಕಾಪರಮೇಶ್ವರಿ ದೇವಿ ವಿಷ್ಣುವರ್ಧನ ರಾಜನ ಕ್ರೌರ್ಯವನ್ನು ಹಿಮ್ಮೆಟ್ಟಿಸಿ ಧರ್ಮಸಂಸ್ಥಾಪನೆ ಯಲ್ಲಿ ಪ್ರಧಾನ ಪಾತ್ರ ವಹಿಸಿದ ಳೆಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಏರ್ಪಡಿಸಿದ್ದ ವಾಸವಿ ಕನ್ಯಕಾಪರಮೇಶ್ವರಿ ಜಯಂತೋತ್ಸವ ವನ್ನು ಉದ್ದೇಶಿಸಿ ಮಾತನಾಡಿದರು
ಸೀತೆ ಅಶೋಕವನದಲ್ಲಿ ಮೌನ ಪ್ರತಿಭಟನೆಯ ಮುಖಾಂತರ ಒಂಟಿಯಾಗಿ ಕಾಲಕಳೆದು ರಾವಣನ ಸಂಹಾರಕ್ಕೆ ಹೇಗೆ ಕಾರಣರಾದರು ಮತ್ತು ದ್ವಾಪರಯುಗದಲ್ಲಿ ದ್ರೌಪತಿ ಛಲ ಮತ್ತು ಹೋರಾಟದಿಂದ ಕುರುಕ್ಷೇತ್ರಕ್ಕೆ ಹೇಗೆ ನಾಂದಿ ಹಾಡಿ ಧರ್ಮ ಪ್ರತಿಷ್ಠಾಪನೆಗೆ ಕಾರಣವಾದಳು ಎಂದರು.
ಈ ಸಮಾಜಕ್ಕೆ ವಾಸವಿ ಕನ್ಯಕಾಪರಮೇಶ್ವರಿ ರವರ ಪರಂಪರೆ ಮತ್ತು ಇತಿಹಾಸ ಅಷ್ಟೇ ಇದೆ ತನ್ನ ರಾಜ್ಯದ ಸೈನಿಕರ ಪ್ರಾಣ ಸಂರಕ್ಷಣೆ ಮಾಡಲು ಇವರು ಅಗ್ನಿ ಪ್ರವೇಶ ಮಾಡಿದ್ದು ಧರ್ಮವನ್ನು ಸಂರಕ್ಷಣೆ ಮಾಡಲು ಅಪ್ರತಿಮ ಸುಂದರಿ ಯಾಗಿದ್ದರು ಲೌಕಿಕ ಬದುಕನ್ನು ತ್ಯಾಗ ಮಾಡಿ ಶಿವನೊಂದಿಗೆ ಅನುರಕ್ತಳಾಗಿ ನ್ಯಾಯ ನೀತಿ ಧರ್ಮಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿ ಪರೋಪಕಾರ ಪಾರಮಾರ್ಥದ ಕಡೆಗೆ ಮನುಕುಲವನ್ನು ತೆಗೆದುಕೊಂಡು ಹೋದಂತ ಸಾತ್ವಿಕ ಮಹಿಳೆಯಾಗಿ ಬದುಕಿದವರು.
ಆದರ್ಶ ಗಳನ್ನ ಇಂದಿನ ಪೀಳಿಗೆಯೂ ಅನುಕರಣಿ ಸುವುದು ಅಗತ್ಯವಾಗಿದೆ ಆರ್ಯವೈಶ್ಯ ಸಮಾಜವು ಸ್ವಾಭಿಮಾನದ ಮೂಲಕ ಸ್ವಾವಲಂಬಿ ಬದುಕನ್ನು ದೇಶದಾದ್ಯಂತ ಕಟ್ಟಿಕೊಂಡು ಇತರೆ ಸಮಾಜಕ್ಕೆ ಮಾದರಿಯಾಗಿದೆ ತಮ್ಮ ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ್ದಾಗಿದೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾಜದ ವ್ಯಕ್ತಿಗಳು ಇನ್ನೂ ಎತ್ತರಕ್ಕೆ ಬೆಳೆಯಬೇಕು. ಸಮಾಜ ಅತ್ಯಂತ ಉತ್ತಮವಾದ ಸಂಸ್ಕಾರವನ್ನು ಒಂದಿದ್ದು ಸಾತ್ವಿಕ ಸಮಾಜವಾಗಿದೆ ಎಂದು ಹೇಳಿದರು
ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ರಘುನಾಥ್ ಬಾಬು ಸಮಸ್ತ ಆರ್ಯವೈಶ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು ಮತ್ತಿತರು
[t4b-ticker]
+ There are no comments
Add yours