ಲಂಚ ಪಡೆಯುವಾಗಲೇ ಎಸಿಬ ಬಲೆಗೆ ಬಿದ್ದ ಅಬಕಾರಿ ಡಿಸಿ ನಾಗಶಯನ

 

 

 

 

ಚಿತ್ರದುರ್ಗ:  ಜಿಲ್ಲೆಯ ಅಬಕಾರಿ ಡಿಸಿ ಎಸಿಬಿ   ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ . ನಗರದ ಜೆಸಿಆರ್ ಬಡಾವಣೆಯ ಕಚೇರಿಯಲ್ಲಿ ಅಬಕಾರಿ ಡಿಸಿ ನಾಗಶಯನ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅಬಕಾರಿ ಡಿಸಿ ವಾಹನ ಚಾಲಕ ಮೌಸಿನ್ ಖಾನ್ ಬಳಿ ಬಾರ್ ಮರು ಪರವಾನಗಿ ಗಾಗಿ 3ಲಕ್ಷ 28 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1ಲಕ್ಷ 28 ಸಾವಿರ ರೂಪಾಯಿ ಮುಂಗಡ ಹಣ  ಪಡೆದಿದ್ದರು. ಬಾರ್ ಮಾಲೀಕ ,  ಮಾಜಿ‌ ಜಿಲ್ಲಾ  ಪಂಚಾಯತ್  ಸದಸ್ಯ ಬಾಬುರೆಡ್ಡಿ ಬಳಿ 2ಲಕ್ಷ 28ಸಾವಿರ ಹಣ  ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

 

 

ಎಸಿಬಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಬಕಾರಿ ಡಿಸಿ ನಾಗಶಯನ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅಬಕಾರಿ ಡಿಸಿ ನಾಗಶಯನ ಪತ್ನಿ ಕವಿತಾ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೆ ನಾಗಶಯನ ರಾಜಕೀಯ ವಲಯದಲ್ಲೂ ಭಾರೀ ಪ್ರಭಾವಿಗಳ ಹಿನ್ನಲೆ ಹೊಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours