ಜೆಡಿಎಸ್ ಪಕ್ಷದ ಜನಪರ ಯೋಜನೆಗಳಿಗೆ ಮೆಚ್ಚಿ ಯುವಕರು ಜೆಡಿಎಸ್ ಸೇರ್ಪಡೆ

 

 

 

 

ಚಳ್ಳಕೆರೆ_06 ರಾಜ್ಯದಲ್ಲಿ ಜೆಡಿಎಸ್ ಪಕ್ಷ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅಂತಹ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯ ಗಳಿಸಿ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ನಿಯೋಜಿತ ಅಭ್ಯರ್ಥಿ ರವೀಶ್ ಕುಮಾರ್ ಎಂದು ತಿಳಿಸಿದರು.

 

 

ಅವರು ನಗರದ ಹೊರವಲಯದ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಹಲವಾರು ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಅದರಂತೆ ಇಂದು ಸಹ ವಿಶ್ವಕರ್ಮ ಸಮಾಜದ ನೂರಾರು ಯುವಕರು ಪಕ್ಷ ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದ್ದಾರೆ ಎಂದರು.
ವಿಶ್ವಕರ್ಮ ಸಮಾಜದ ಯುವ ಘಟಕದ ಅಧ್ಯಕ್ಷ ವೆಂಕಟೇಶ್ ಬಿಎಂಜಿ ಹಾಗೂ ನೂರಾರು ಯುವಕರು ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ ತಿಪ್ಪೇಸ್ವಾಮಿ ನಗರಸಭಾ ಸದಸ್ಯರಾದ ಪ್ರಮೋದ್ ಶ್ರೀನಿವಾಸ್ ತಿಮ್ಮಣ್ಣ ತಿಮ್ಮಪ್ಪ ಭೀಮಣ್ಣ ಆನಂದಪ್ಪ ವೆಂಕಟೇಶಾಚಾರ್ ಮುಂತಾದವರಿದ್ದರು

[t4b-ticker]

You May Also Like

More From Author

+ There are no comments

Add yours