ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ 81 ಎಕರೆ ಜಮೀನನ್ನು ನೀಡಿದಂತಹ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ರವರನ್ನು ಶ್ರೀ ಮಠದ ವತಿನಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ರವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಶ್ರೀ ಮಠದ ಉಪಾಧ್ಯಕ್ಷರು ಹಾಗೂ ಹಿರಿಯ ಸಚಿವರಾದ ಶ್ರೀ ಗೋವಿಂದ್ ಕಾರಜೋಳ ರವರು, ಕೇಂದ್ರ ಸಚಿವರಾದ ಶ್ರೀ ಆನೇಕಲ್ ನಾರಾಯಣಸ್ವಾಮಿ ರವರು, ಶ್ರೀ ಮಠದ ಕೋಶಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಬಿ.ಎನ್.ಚಂದ್ರಪ್ಪ ರವರು, ಬಿ.ಎಸ್.ಪಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಮಾರಸಂದ್ರ ಮುನಿಯಪ್ಪ ರವರು, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಎಂ.ಶಿವಣ್ಣ ರವರು, ಶ್ರೀ ಮಠದ ಆಡಳಿತಾಧಿಕಾರಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಬಿ.ಎಚ್.ಅನಿಲ್ ಕುಮಾರ್ ರವರು ಸೇರದಂತೆ ಅನೇಕರು ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.
[t4b-ticker]
+ There are no comments
Add yours