ಮುದಗಲ್ ಯಿಂದ ಇಳಕಲ್ ಗೆ ಖಾಸಗಿ ಕಾರ್ಯ ನಿಮಿತ್ತ ಪ್ರಯಾಣಿಸುತ್ತಿದ್ದ ಮುಸ್ಲಿಂ ಸಮಾಜದ ಮುದಗಲ್ ನಿವಾಸಿ
ಸಿಕಂದರ್ (40), ಸಾಲಿಯ ಬೇಗಂ (35),ನಿಲೋಫರ್ ಬಾನು (30), ರಜೀಯ ಬೇಗಂ (25) KA 36 P 6180
ಮಾರುತಿ ಎಕ್ಸಪ್ರೆಸ್ ಕಾರ್ ಇಳಕಲ್ ತಾಲ್ಲೂಕಿನ ತುಂಬದ ಬಳಿ ರಾಯಚೂರು ರಸ್ತೆಯಲ್ಲಿ ತೀವ್ರವಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.
ಅಪಘಾತ ಸಂದರ್ಭದಲ್ಲಿ ಹಿಂದೆ ಪ್ರಯಾಣಿಸುತ್ತಿದ್ದ ಬಾಗಲಕೋಟೆ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಅಪಘಾತಕ್ಕೀಡಾದವರನ್ನು ತಮ್ಮ ಕಾರಿನಲ್ಲಿಯೇ ಇಳಕಲ್ ಎನ್.ಆರ್.ಪಾಟೀಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು.
ಪ್ರಾಣಾಪಾಯದಿಂದ ಪಾರದವರು ಶ್ರೀಗಳನ್ನು ಸಾಕ್ಷಾತ್ ದೇವರೆಂದು ಭಾವಿಸಿ ನಮಸ್ಕರಿಸಿದರು.
[t4b-ticker]
+ There are no comments
Add yours