ಹಿರಿಯೂರು ತೇರು ಮಲ್ಲೇಶ್ವರ ಸ್ವಾಮಿಯ ಹುಂಡಿ ಕಳವು

 

 

 

 

ಹಿರಿಯೂರು ತೇರು ಮಲ್ಲೇಶ್ವರ ಸ್ವಾಮಿಯ ಹುಂಡಿ ಕಳವು

 

 

ಹಿರಿಯೂರು. ಏಪ್ರಿಲ್: 13:
ಹಿರಿಯೂರಿನ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ದೇವಾಲಯದ ಬೀಗ ಮುರಿದು ಒಳನುಗ್ಗಿದ ಕಳ್ಳರು 2 ಹುಂಡಿಗಳನ್ನು ಹೊಡೆದು
ಕಳ್ಳತನ ಮಾಡಿರುತ್ತಾರೆ. ಸ್ಥಳಕ್ಕೆ ದೇವಾಲಯದ ಆಡಳಿತಾಧಿಕಾರಿ, ಅರ್ಚಕರು, ಬೆರಳಚ್ಚು ತಜ್ಞರು, ತಾಲೂಕು ಕಚೇರಿ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು ಇನ್ನಷ್ಟು ವಿಷಯ ತನಿಖೆಯ ನಂತರ ತಿಳಿಯಬೇಕಾಗಿದೆ. ಸ್ಥಳಕ್ಕೆ ಆಗಮಿಸಿದ್ದ ದೇವಸ್ಥಾನದ ಮಾಜಿ ಕನ್ವೀನರ್ ವಿ.ಹೆಚ್.ರಾಜುರವರು ಮಾತನಾಡಿ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು ಕೆಟ್ಟುಹೋಗಿದ್ದು ಸರಿಪಡಿಸುವಂತೆ ತಿಳಿಸಿದ್ದರೂ ಸರಿಪಡಿಸಿರುವುದಿಲ್ಲ ಎಂದು ಆರೋಪಿಸಿರುತ್ತಾರೆ
ವಿಷಯ ತಿಳಿದ ತಕ್ಷಣ ನಗರದ ನೂರಾರು ಜನ ಭಕ್ತರು ಹಾಗೂ ಸಾರ್ವಜನಿಕರು ದೇವಾಲಯದ ಆವರಣದಲ್ಲಿ ನೆರೆದು ವೀಕ್ಷಿಸುವ ದೃಶ್ಯ ಕಂಡುಬಂತು

[t4b-ticker]

You May Also Like

More From Author

+ There are no comments

Add yours