ಚಿತ್ರದುರ್ಗ (ಕರ್ನಾಟಕವಾರ್ತೆ) ಏ.12:
ಏಪ್ರಿಲ್ 16ರಂದು ಜಿಲ್ಲಾಧಿಕಾರಿ ಕವಿತಾ ಎಸ್, ಮನ್ನಿಕೇರಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹೊಸದುರ್ಗ ತಾಲ್ಲೂಕಿನ ದೊಡ್ಡಬ್ಯಾಲದಕೆರೆಯಲ್ಲಿ ಗ್ರಾಮವಾಸ್ತವ್ಯ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿಗಳು ಭೇಟಿ ನೀಡುವ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕಿನ ತಹಶೀಲ್ದಾರರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಅದೇ ದಿನದಂದು ಚಿತ್ರದುರ್ಗ ತಾಲ್ಲೂಕಿನ ತಹಶೀಲ್ದಾರ್ ಕುರುಮರಡಿಕೆರೆ, ಹಿರಿಯೂರು ತಾಲ್ಲೂಕಿನ ತಹಶೀಲ್ದಾರ್ ತಳವಾರಹಟ್ಟಿ, ಚಳ್ಳಕೆರೆ ತಹಶೀಲ್ದಾರ್ ಹನುಮಂತನಹಳ್ಳಿ, ಮೊಳಕಾಲ್ಮುರು ತಾಲ್ಲೂಕು ತಹಶೀಲ್ದಾರ್ ಉಡೇವುಗೆ ಗ್ರಾಮದಲ್ಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
[t4b-ticker]
+ There are no comments
Add yours