ಸಂಭ್ರಮದ ರಾಮ ನವಮಿ: ರಾಮ ನವಮಿ ಶೋಭಯಾತ್ರೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

 

 

 

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ   ಜಿಲ್ಲೆಯಲ್ಲಿ ಇಂದ  ಶ್ರೀರಾಮ ನವಮಿಯನ್ನು  ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಲಾಯಿತು.  ಪ್ರತಿ ಮನೆ-ಮನಗಳಲ್ಲಿ ಶ್ರೀರಾಮನ ನಾಮ ಸ್ಮರಣೆ ಮೊಳಗಿತು.. ಶ್ರೀರಾಮ ಸ್ಮರಣೆಯಲ್ಲಿ ಭಕ್ತ ಸಮೂಹ ಮಿಂದೆದ್ದಿತು.

ಎರಡು ವರ್ಷ ಕಾಲ  ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆದಿದ್ದ ಶ್ರೀರಾಮ ನವಮಿ ಈ‌ವರ್ಷ ಸಂಭ್ರಮದಿಂದ ಜರುಗುತು.

ನವಾಮಿಯಂದು  ‌ಭಕ್ತಿಯ  ಶೋಭಾಯಾತ್ರೆ ನಡೆಯಿತು.

 

 

ಜೈಶ್ರೀರಾಮ ಬಳಗದ ವತಿಯಿಂದ ಶ್ರೀರಾಮ ಭಾವಚಿತ್ರದ ಶೋಭಾಯಾತ್ರೆ ನಗರದಾದ್ಯಂತ ಭಕ್ತಿಯಿಂದ  ಜರುಗಿತು. ಈ ಶೋಭ ಯಾತ್ರೆಗೆ  ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಕನಕ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್ಬಿಎಂ ಸರ್ಕಲ್, ಪ್ರವಾಸಿ ಮಂದಿರ ಮುಂಭಾಗ,  ಬಿ.ಡಿ.ರಸ್ತೆ ಮಾರ್ಗವಾಗಿ ರಂಗಯ್ಯನಬಾಗಿಲು ತಲುಪಿತು. ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಹರೀಶ್,  ಚಾಲುಕ್ಯ ನವೀನ್ ,  ಶ್ರೀರಾಮ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‍ಕುಮಾರ್ ಇದ್ದರು.

[t4b-ticker]

You May Also Like

More From Author

+ There are no comments

Add yours