ಚಳ್ಳಕೆರೆ-12 131ನೇ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಂಗಳವಾರ ನಗರದ ಅಂಬೇಡ್ಕರ್ ನಗರದ ವ್ಯಾಪ್ತಿಯಲ್ಲಿ ಸ್ವಚ್ಚತಾ ಆಂದೋಲನ ನಡೆಸಿತು.
ಈ ಸಂದರ್ಭದಲ್ಲಿ ಅಲ್ಲಿನ ಕಾಯ್ದಿಟ್ಟ ಅರಣ್ಯ ಇಲಾಖೆಯ ಹಳೇ ಜಾಗದ ಸ್ವಚ್ಚತೆಯ ಬಗ್ಗೆ ಈ ಹಿಂದೆ ಅನೇಕ ಬಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದರೂ ಸ್ವಚ್ಛತೆ ಬಗ್ಗೆ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ವಾರ್ಡಿನ ಜನರ ಸಮಸ್ಯೆಗೆ ಸಿಲುಕುತ್ತಾರೆ. ಬರುವ ದಿನಗಳಲ್ಲಿ ಸ್ವಚ್ಛತೆ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಂಡಿ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜನಪ್ಪ ಮಾತನಾಡಿ, 14 ರಂದು ನಡೆಯಲಿರುವ ಡಾ.ಬಿಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ತಾಲೂಕು ಆಡಳಿತ ನಗರಸಭೆ ಕಂದಾಯ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿ ಇತರೆ ಸಂಘ ಸಂಸ್ಥೆಯ ವತಿಯಿಂದ ಸ್ವಚ್ಚತ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಜುಳಾ, ನಗರಸಭೆ ಸದಸ್ಯರಾದ ರಮೇಶ್ ಗೌಡ, ವೀರಭದ್ರಯ್ಯ, ಎಂ.ಜೆ ರಾಘವೇಂದ್ರ, ನಗರಸಭೆ ಪೌರಾಯುಕ್ತೆ ಲೀಲಾವತಿ ನಗರಸಭೆ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಗಣೇಶ್, ದಾದಾಪೀರ್, ಮಾಜಿ ಉಪಾಧ್ಯಕ್ಷ ಟಿ. ವಿಜಯಕುಮಾರ್ ಮುಖಂಡರಾದ ಚಂದ್ರು,ವಕೀಲ ಪಾಪಯ್ಯ ಮೊದಲಾದವರು ಇದ್ದರು.
+ There are no comments
Add yours