ಹರ್ತಿಕೋಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸಿಪಿಐ ರಾಘವೇಂದ್ರ ಚಾಲನೆ

 

 

 

 

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಹರ್ತಿಕೋಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸಿಪಿಐ ರಾಘವೇಂದ್ರ ಚಾಲನೆ ನೀಡಿದರು.

ಹರ್ತಿಕೋಟೆಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ತುಂಬಾ ಕಲರ್ ಫುಲ್ ಆಗಿದೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು ಆಗ ಮಾತ್ರ ಕ್ರೀಡೆಗೆ ಒಂದು ಅರ್ಥ ಬರುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು ಸಮಾನವಾಗಿ ಸ್ವೀಕರಿಸಿದರೆ ಮುಂದೊಂದು ದಿನ ಗೆಲುವು ಸಾಧಿಸಬಹುದು ಎಂದು ತಿಳಿಸಿದರು.

 

 

ಇದೇ ವೇಳೆ ಕ್ರೀಡಾಪಟುಗಳು ಸಿಪಿಐ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್‌ಐ ಅಶ್ವಿನಿ, ವೀರೇಂದ್ರ ಸಿಂಹ, ಪ್ರತಾಪ್ ಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಯಶೋಧಮ್ಮ ರಾಜಣ್ಣ, ಕರಿಯಮ್ಮ ಜುಂಜ್ರಾ ನಾಯ್ಕ, ನಾಗವೇಣಿ ಹನುಮಂತಪ್ಪ, ನೀಲಮ್ಮ ಮೂಡಲಗಿರಿಯಪ್ಪ, ಪರಮೇಶ್, ಪಾಂಡುರಂಗಪ್ಪ ಸೇರಿದಂತೆ ಕ್ರಿಕೆಟ್ ವ್ಯವಸ್ಥಾಪಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours