ರಾಜ್ಯದ ರೈತರಿಗೆ ಬಿಗ್ ಶಾಕ್ ನೀಡಿದ ಸರ್ಕಾರ:ಹದ್ದು ಬಸ್ತ್ ಸರ್ವೇ ಶುಲ್ಕ ದುಪ್ಪಟ್ಟು ಎಷ್ಟು ಗೊತ್ತೆ ನೋಡಿ.

 

 

 

 

ಬೆಂಗಳೂರು: ಈಗಾಗಲೇ ಕೊರೋನಾ ಸಂಕಷ್ಟ ( Coronavirus ) ತಂದಿಟ್ಟಂತ ಸಂಕಷ್ಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆದಂತ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ಕಂದಾಯ ಇಲಾಖೆಯಿಂದ ( Revenue Department ) ಮೋಜಿಣಿ ವ್ಯವಸ್ಥೆಯಡಿಯಲ್ಲಿ ಹದ್ದುಬಸ್ತು ಅರ್ಜಿಗಳ ಶುಲ್ಕವನ್ನು ಏಕಾಏಕಿ 43 ರಿಂದ 57 ಪಟ್ಟು ಹೆಚ್ಚಳ ಮಾಡಲಾಗಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಹದ್ದುಬಸ್ತು ಸೇವೆಗಳಿಗೆ ವಿಧಿಸುತ್ತಿರುವ ಅರ್ಜಿ ಶುಲ್ಕವನ್ನು ಸುಮಾರು 45 ವರ್ಷಗಳಿಂದ ಪರಿಷ್ಕರಿಸಿರುವುದಿಲ್ಲ. ಅಲ್ಲದೇ ಪ್ರಸ್ತುತ ಮೋಜಿಣಿ ವ್ಯವಸ್ಥೆಯ ನಿರ್ವಹಣಾ ವೆಚ್ಚವೂ ಅಧಿಕವಾಗಿರುವುದರಿಂದ, ಸಾರ್ವಜನಿಕರಿಗೆ ಭೂಮಾಪನ ಇಲಾಖೆಯಿಂದ ( Survey Department ) ಒದಗಿಸಲಾಗುತ್ತಿರುವ ಹದ್ದುಬಸ್ತು ಸೇವೆಗಳಿಗೆ ವಿಧಿಸುತ್ತಿರುವ ಅರ್ಜಿ ಶುಲ್ಕ ( Application Fee ) ಪರಿಷ್ಕರಿಸೋದಕ್ಕೆ ನಿರ್ಣಯಿಸಲಾಗಿದೆ.

 

 

ಹೀಗಿದೆ ನೂತನ ಹದ್ದು ಬಸ್ತು ಅರ್ಜಿ ಶುಲ್ಕ

  • ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ ರೂ.1,500 ಶುಲ್ಕವನ್ನು ವಿಧಿಸಲಾಗಿದೆ. 2 ಎಕರೆಗಿಂತ ಹೆಚ್ಚು ವಿಸ್ತೀರ್ಣಕ್ಕೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.300ರಿಂದ ಗರಿಷ್ಠ್ಟ ಶುಲ್ಕ ರೂ.3000ಕ್ಕೆ ಮಿತಿಗೊಳಿಸಲಾಗಿದೆ.
  • ನಗರ ಪ್ರದೇಶದಲ್ಲಿ 2 ಎಕರೆವರೆಗೂ ರೂ.2000 ವಿಧಿಸಲಾಗಿದೆ. ಇನ್ನೂ 2 ಎಕರೆಗಿಂತ ಹೆಚ್ಚಿದ್ದರೇ, ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.400 ರಿಂದ ಗರಿಷ್ಟ ಶುಲ್ಕ ರೂ.4000ಕ್ಕೆ ಮಿತಿಗೊಳಿಸಲಾಗಿದೆ.
  • ಇದಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜೂದಾರರಿಗೆ ನೋಟಿಸ್ ಶುಲ್ಕವಾಗಿ ರೂ.25 ವಿಧಿಸಿದೆ.

ಈ ಮೇಲ್ಕಂಡ ಪರಿಷ್ಕೃತ ನೂತನ ದರಗಳು ದಿನಾಂಕ 01-02-2022ರಿಂದ ಜಾರಿಗೊಳ್ಳಲಿದೆ. ಆದ್ರೇ ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಈ ದರ ಅನ್ವಯಿಸೋದಿಲ್ಲ ಎಂಬುದಾಗಿ ಕಂದಾಯ ಇಲಾಖೆಯ ಭೂಮಾಪನ ವಿಭಾಗದ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours