ಚಳ್ಳಕೆರೆ: ಭಾರತದ ಚರಿತ್ರ್ಯ ಭಾರತದ ಸಂಸ್ಕೃತಿ ಮತ್ತು ಭಾರತದ ಆದ್ಯಾತ್ಮತೆಯನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.
ಚಳ್ಳಕೆರೆ ನಗರದ ಹೊಂಗಿರಣ ಪ್ರೌಢ ಶಾಲೆಯಲ್ಲಿ ಆಯೋಜಿಸದ್ದ ಯುವ ದಿನೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು
ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗಿದೆಯೆಂದು ಸ್ವಾಮಿವಿವೇಕಾನಂದರು ಚಿಕಗೋ ನಗರದಲ್ಲಿ ಯುವ ಸಮೂಹವಂನ್ನುದ್ದೇಶಿಸಿ ನೀಡಿದ ಸಂದೇಶ ಜಗತ್ತಿನ ಯುವ ಸಮೂಹದಲ್ಲಿ ಹೊಸ ಶಕೆಯನ್ನೇ ಸೃಷ್ಟಿ ಮಾಡಿತುು. ಸದಾ ಭಾರತ ಮಾತೆಯ ಭಾರತೀಯರ ಸಂಸ್ಕೃತಿಯ ಬಗ್ಗೆ ಚಿಂತಿಸಿದ ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಅವರ ತತ್ವಗಳನ್ನು ವಿದ್ಯಾರ್ಥಿ ಗಳು ಮೈಗುಡಿಸಿ ಕೊಳ್ಳಲು ಸಲಹೆ ನೀಡಿದರು. ವಿವೇಕಾನಂದರು ಯುವಕರಿಗೆ ಒಂದು ಶಕ್ತಿ ಇದ್ದಂತೆ ಅವರ ದಾರಿಯಲ್ಲಿ ಯುವ ಸಮೂಹ ನಡೆದರೆ ಗೆಲುವು ತನ್ನದಾಗಿಸಿಕೊಳ್ಳಬಹುದು ಎಂದು ಕಿವಿ ಮಾತುಹೇಳಿದರು.
[t4b-ticker]
+ There are no comments
Add yours