ಮಹಿಳೆಯರಿಗೆ ಉಚಿತ ಸೀರೆ ವಿತರಣೆ ಮುಗಿಬಿದ್ದ ಸಾವಿರಾರು ಮಹಿಳೆಯರು.

 

 

 

 

ಹಾಸನ : ಹಾಸನ ಜಿಲ್ಲೆಯ  ಅರಕಲಗೂಡಿನಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ವಿತರಿಸಲಾಗಿದ್ದು, ಸೀರೆ ಪಡೆಯಲು ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿರುವ ಘಟನೆ ನಡೆದಿದೆ.

 

 

ನಿವೃತ್ತ  ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧೃವನಾರಾಯಣ, ಮಾಜಿ ಸಚಿವೆ ಉಮಾಶ್ರೀ, ನಟಿಯರಾದ ಶಾನ್ವಿ ಶ್ರೀವಾತ್ಸವ್, ಮಿಲನಾ ನಾಗರಾಜ್ ಹಾಗೂ ನಟ ಸಾಧು ಕೋಕಿಲ ಭಾಗವಹಿಸಿದ್ದರು.

ಐದು ಸಾವಿರಕ್ಕೂ ಅಧಿಕ ಮಹಿಳೆಯರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಬಾಗಿನ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ  ಉಚಿತ  ಸೀರೆ ವಿತರಣೆಗೆ ಮುಂದಾಗುತ್ತಿದ್ದಂತೆ ಮಹಿಳೆಯರು ಮುಗಿಬಿದ್ದರು. ಸೀರೆ ಪಡೆಯಲು ಮಹಿಳೆಯರು ಮುಗಿಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿದೆ.

[t4b-ticker]

You May Also Like

More From Author

+ There are no comments

Add yours