ಚಿತ್ರದುರ್ಗ: ಸಂತೋಷ ಆದಾಗ ನಮ್ಮ ಕಡೆ ಗುಂಡನ್ನು ಹಾರಿಸುವುದು ನಮ್ಮ ಪರಂಪರೆ ಎಂದು ,ಗೃಹ ಸಚಿವರು ಹೇಳುತ್ತಾರೆ ಎಂದರೆ ಬಿಜೆಪಿ ಸಂಸ್ಕ್ರತಿಯನ್ನು ತೋರಿಸುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ. ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಗೃಹ ಸಚಿವರಾದ ಅರಗ ಜ್ಙಾನೇಂದ್ರ ಅವರು ಗುಂಡು ಹಾರಿಸುವುದು ನಮ್ಮ ಸಂಪ್ರದಾಯ ಎಂದು ಹೇಳುತ್ತರೆ . ಬಿಜಪಿಯದು ತಾಲಿಬಾನ್ ಸಂಸ್ಕ್ರತಿ ಬಿಜೆಪಿಯಲ್ಲಿ ಕಾಣುತ್ತಿದೆ. ರಾಜ್ಯದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಜೆಪಿ ಕಲಿತಿದೆ. ಕರ್ನಾಟಕವನ್ನು ಬಿಹಾರ್ ಅಥವಾ ಉತ್ತರಪ್ರದೇಶ ಮಾಡಬೇಡಿ. ಕರ್ನಾಟಕ ಶಾಂತಿಪ್ರಿಯ ರಾಜ್ಯ ಎಂದರು. ಇಲ್ಲಿ ತಾಲಿಬಾನ್ ಸಂಸ್ಕ್ರತಿ ತರಬೇಡಿ ಎಂದು ಮನವಿ ಮಾಡಿದರು. ಕಾಲ ಮಿಂಚಿಲ್ಲ ನಿಮ್ಮ ಮುಖ್ಯಮಂತ್ರಿ ಬಳಿ ವಿಷಯವನ್ನು ಪಡೆದು ಆಳ್ವಿಕೆ ಮಾಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಪ್ರಧಾನ ಮಂತ್ರಿಗಳಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಇದೆ. ವಿರೋಧ ಪಕ್ಷದ ರಾಜಕಾರಣಿಗಳ ಮೇಲೆ ಇಡಿ, ಇನ್ಕಕಂ ಟ್ಯಾಕ್ಸ್ ಬಿಟ್ಟು ಸುಳ್ಳು ಕೇಸ್ ಗಳನ್ನು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ವಿರೋಧ ಪಕ್ಷದವರು ಕಲಾಪ ನಡೆಸಲು ಬಿಡುವುದಿಲ್ಲ ಎಂದ ಹೇಳುತ್ತಾರೆ. ನಾವು ಕೇಳಿದ್ದು ಅಧಿಕಾರಿಗಳು, ರಾಜಕಾರಣಿಗಳ, ಮಿಲಿಟರಿಯ ಅವರ ಫೋನ್ ಟ್ಯಾಪ್ ಮಾಡುವ ಮೂಲಕ ಗಂಡಾಂತರ ತಂದು ಒಡ್ಡುತ್ತಿದ್ದಾರೆ.
ಅಭಿವ್ಯಕ್ತಿ ಸ್ವತಂತ್ರಕ್ಕೆ ಧಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಮಾಡಿದರು ಅದನ್ನು ಚರ್ಚಿಸಲು ಬಿಜೆಪಿ ನಾಯಕರಿಗೆ ಮನಸ್ಸಿಲ್ಲ.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಭಾರತದ ಸಂವಿಧಾನ ಉಳಿಸಲು ಬಿಜೆಪಿ ತಯಾರಿಲ್ಲ. ದೇಶದ ಸ್ಥಿತಿಯನ್ನು ಆದೋಗತಿಗೆ ತಲುಪಿದೆ. ಪ್ರಧಾನ ಮಂತ್ರಿ 45 ಜನಪ್ರಿಯತೆ 25 % ಗೆ ಜನಪ್ರಿಯತೆ ಇಳಿದಿದೆ. ದೇಶದ ಜನರಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ತಡೆಗಟ್ಟುವಲ್ಲಿ ಮತ್ತು ಉದ್ಯೋಗ ಸೃಷ್ಟಿಸಲು ಸಂಪೂರ್ಣ ವಿಫಲವಾಗಿದೆ.
ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡುವುದು ಯಾವ ಅಭಿವೃದ್ಧಿ ಮಾಡಿದೆ ಎಂದು ನಡೆಸುತ್ತಿದೆ ಎಂದು ಬಿಜೆಪಿ ಹರಿಹಾಯ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜಪೀರ್, ಪ್ರಧಾನ ಕಾರ್ಯದರ್ಶಿ ಸಂತೋಷ್, ಬಿ.ಟಿ.ಜಗದೀಶ್, ಮೈಲಾರಪ್ಪ,
[t4b-ticker]
+ There are no comments
Add yours