ಚಳ್ಳಕೆರೆ ತಾಲೂಕು ತಳಕು ಹೋಬಳಿ ಬನವಿಗೊಂಡನಹಳ್ಳಿ
ಗ್ರಾಮದ ರಿಸನಂ.1ರಲ್ಲಿ 5.16 ಎಕರೆ- ಗುಂಟೆ ಸರ್ಕಾರಿ ಜಮೀನಿದ್ದು ಈ ಜಮೀನನ್ನು ಇದೇ ಗ್ರಾಮದ ತಿಪ್ಪಣ್ಣ ಎಂಬುವವರು ಕಳೆದ ನಾಲ್ಕೈದು ವರ್ಷದಿಂದ ಒತ್ತುವರಿ ಮಾಡಿಕೊಂಡಿದ್ದು , ಈ ಸಾಲಿನಲ್ಲಿ ವ್ಯವಸಾಯ ಮಾಡದೇ ಇದ್ದರೂ ಇದೇ ಜಾಗದಲ್ಲಿ ಬಸವಣ್ಣನ ದೇವಸ್ಥಾನವಿದ್ದು ಈ ದೇವಸ್ಥಾನವನ್ನು ಸೇರಿದಂತೆ ಕಬ್ಜೆ ಮಾಡಿಕೊಂಡಿದ್ದು ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿಯಾಗಿದ್ದು ಗ್ರಾಮಸ್ಥರು ದಿನಾಂಕ .23.9.2021 ರಂದು ತಹಶೀಲ್ದಾರರಿಗೆ ಭೇಟಿ ಮಾಡಿ ಮನವಿ ಮಾಡಿದ್ದು ಮನವಿಯನ್ನು ಆಧರಿಸಿದ ತಹಶೀಲ್ದಾರ್ ರವರು ಇಂದು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಬ್ಜೆ ದಾರನೊಂದಿಗೆ ಚರ್ಚಿಸಿ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಹೊಂದುವುದು ಅಪರಾಧವೆಂದು ಎಚ್ಚರಿಸಿ ವಿವಾದಿತ ಜಮೀನನ್ನು ಸರಕಾರದ ವಶಕ್ಕೆ ಪಡೆದಿದ್ದಾರೆ.
ಈ ಗ್ರಾಮದ ಸಾರ್ವಜನಿಕರಿಗೆ ನಿವೇಶನ ಮನೆ ಮುಂತಾದ ಅವಶ್ಯಕತೆಗೆ ಜಮೀನನ್ನು ಮೀಸಲಿರಿಸಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೂಚಿಸಿದ್ದು, ಅದರಂತೆ ಗ್ರಾಮದ ಆಗತ್ಯತೆ ಯ ನಿವೇಶನ ಮನೆ ಮುಂತಾದ ಅವಶ್ಯಕತೆಗೆ ಈ ಜಮೀನನ್ನು ಮೀಸಲಿರಿಸಲು ಜಿಲ್ಲಾಧಿಕಾರಿಗಳ ವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
+ There are no comments
Add yours