ಚಳ್ಳಕೆರೆ: 29:ನಗರದ ಸುರಕ್ಷಾ ಪಾಲಿಕ್ಲಿನಿಕ್ ಮತ್ತು ನೇತಾಜಿ ಸ್ನೇಹ ಬಳಗ ಸಂಯುಕ್ತಾಶ್ರಯದಲ್ಲಿ ಸುಭಾಷ್ ಚಂದ್ರಬೋಸ್ ಮತ್ತು ಸ್ವಾಮಿವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ.30ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಫರೀದ್ಖಾನ್ ತಿಳಿಸಿದ್ದಾರೆ.
ಅವರು, ಪತ್ರಿಕೆಗೆ ಮಾಹಿತಿ ನೀಡಿ, ಪಾಲಿಕ್ಲಿನಿಕ್ನ ಕಚೇರಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸುವರು.
ಖ್ಯಾತ ತಜ್ಞರಿಂದ ಉಚಿತವಾಗಿ ತಪಾಸಣೆ ನಡೆಸಲಾಗುವುದು, ನವಜಾತ ಶಿಶು ತಜ್ಞರು, ಕಿವಿ, ಮೂಗು, ಗಂಟಲು, ಎಂಡೋಸ್ಕೋಪಿ, ಲ್ಯಾಪ್ರೋಸ್ಕೋಪಿ, ಕರೋನಾಸ್ಕೋಪಿ, ಕೀಲು, ಮೂಳೆ, ಸಕ್ಕರೆ ಕಾಯಿಲೆ ಮುಂತಾದ ರೋಗಗಳಿಗೆ ತಜ್ಞ ವೈದ್ಯರು ತಪಾಸಣೆ ನಡೆಸಿ ಮಾರ್ಗದರ್ಶನ ನೀಡುವರು. ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಫರೀದ್ಖಾನ್ ಮನವಿ ಮಾಡಿದ್ಧಾರೆ.
+ There are no comments
Add yours