ನಾನು ಕೈಗಾರಿಕ ಮಂತ್ರಿಯಾದಾಗ ಕೇಂದ್ರ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇ : ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ

 

 

 

 

ಚಳ್ಳಕೆರೆ ನಗರದಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಗೆ ನಾನು ಕೈಗಾರಿಕ ಮಂತ್ರಿಯಾದಾಗ ಕೇಂದ್ರ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಅವರು ಭಾನುವಾರ ನಗರದ ಶಾಸಕರ ಭವನಕ್ಕೆ ಭೇಟಿ ನೀಡಿ ಅಲ್ಲಿನ ಎಲ್ಲಾ ನಾಯಕರ‌ ಭಾವಚಿತ್ರ‌, ಅಭಿವೃದ್ಧಿ ಕಾರ್ಯಗಳ‌ ಚಿತ್ರ ವೀಕ್ಷಿಸಿದರು. ಶಾಸಕ ಟಿ.ರಘುಮೂರ್ತಿಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ನಾನು ರಾಜ್ಯದ ಹಲವಾರು ವಿಧಾನಸಭಾಕ್ಷೇತ್ರಗಳಿಗೆ ಭೇಟಿ ನೀಡಿದ್ದು ಈ ರೀತಿಯ ಅಭಿವೃದ್ಧಿ ಎಲ್ಲೂ ಕಂಡಿಲ್ಲ. ವಿಶೇಷವಾಗಿ ಶಾಸಕರ ಭವನದಲ್ಲೇ ರಾಷ್ಟ್ರಪತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ನಾಯಕರ ಹಾಗೂ ರಾಜ್ಯದ ಪ್ರಮುಖರ ಪೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ ಎಂದು ಸಂತಸಪಟ್ಟರು.

 

 

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ಪ್ರಭುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಮುಖಂಡರಾದ ಡಿ.ಕೆ.ಕಾಟಯ್ಯ, ಡಾ.ಬಿ.ಯೋಗೇಶ್‍ಬಾಬು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ರಮೇಶ್‍ಗೌಡ, ನಗರಸಭಾ ಉಪಾಧ್ಯಕ್ಷೆ ಜೈತುಂಬಿ, ಸದಸ್ಯರಾದ ವಿರೂಪಾಕ್ಷಪ್ಪ, ಚಳ್ಳಕೆರೆಯಪ್ಪ, ಸಾವಿತ್ರಮ್ಮ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours