ನಾಟಕರಂಗ ಇನ್ನೂ ಹೆಚ್ಚು ಗಟ್ಟಿಯಾಗಿ ನೆಲೆಯೂರಲು ಎಲ್ಲರೂ ಕೈಜೋಡಿಸಬೇಕೆಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಅವರು, ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ರಂಗಕರ್ಮಿ ಕಾಲುವೇಹಳ್ಳಿ ರಂಗಸ್ವಾಮಿ ವಿರಚಿತ ಪ್ರಾಣ ತ್ಯಾಗಿ ಅಥಾರ್ತ್ ಪ್ರೇಮಪರಿತಾಪ ಎಂಬ ಸಾಮಾಜಿಕ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾಟಕದ ಎಲ್ಲಾ ಕಲಾವಿದರೂ ಜನಸಾಮಾನ್ಯರ ಮನದಲ್ಲಿ ಆಳಾವಾಗಿ ಬೇರೂರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ರಂಗಕಲೆಯ ಗೌರವವನ್ನು ಇನ್ನೂ ಹೆಚ್ಚಿಸಿದ್ದಾರೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೊಪ್ಪಿನ ಆರ್.ಪಾಲಯ್ಯ, ಗ್ರಾಮದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾವು ಏರ್ಪಡಿಸುವುದು ಸ್ವಾಭಾವಿಕ. ಇದೇ ಪ್ರಥಮ ಭಾರಿಗೆ ನನ್ನ ಅಧ್ಯಕ್ಷತೆಯಲ್ಲಿ ಪ್ರಾಣತ್ಯಾಗಿ ಸಾಮಾಜಿಕ ನಾಟಕ ಕೃತಿ ಬಿಡುಗಡೆಯೊಂದಿಗೆ ಪ್ರದರ್ಶನವಾಗುತ್ತಿದೆ. ಜನರ ಇದನ್ನು ಹೆಚ್ಚು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಪಾಲಯ್ಯ, ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್,
ರೈತ ಮುಖಂಡ ಕೆ.ಪಿ.ಭೂತಯ್ಯ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours