ಚಿತ್ರದುರ್ಗ ಏ. ೧೩
ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯ ಸಮಿತಿಯವತಿಯಿಂದ ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದಲ್ಲಿ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಮಧ್ಯಾಹ್ನ ಏರ್ಪಡಿಸಿದ್ದ ಬೈಕ್ ರ್ಯಾಲಿಯನ್ನು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಬೈಕ್ಗಳು, ವಿವಿಧ ಆಟೋಗಳು ಮೇಲೆ ಜೈ ಭೀಮ ಎಂಬ ಬಾವುಟವನ್ನು ಹಾಕಿಕೊಂಡು ಅಂಬೇಡ್ಕರ್ಗೆ ಜೈಯವಾಗಲೀ, ಜೈ ಅಂಬೇಡ್ಕರ್ ಎಂದು ಘೋಷಣೆಗಳನ್ನು ಕೂಗುವುದರ ಮೂಲಕ ಬೀಮಯಾತ್ರೆ ಯಶಸ್ವಿಯಾಗಲಿ ಎಂದು ಜೈಕಾರ ಹಾಕಿದರು.
ನಗರದ ಬಿ.ಡಿ.ರಸ್ತೆ, ಸಂತೇಪೇಟೆ ವೃತ್ತ, ಹೊಳಲ್ಕರೆ ರಸ್ತೆ, ಸಂಗೂಳ್ಳಿ ರಾಯಣ್ಣ ವೃತ್ತ, ಬುರುಜನ ಹಟ್ಟಿ, ಅನೇಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ಮದಕರಿ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಮರಳಿ ಅಂಬೇಡ್ಕರ್ ವೃತ್ತವನ್ನು ತಲುಪಿದೆ.
[t4b-ticker]
+ There are no comments
Add yours