ಚಿಕ್ಕೋಡಿ: ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಿಇಒ ಕಡೆಯಿಂದ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಉದ್ಯೋಗ ಖಾತ್ರಿ ಜನರಿಗಾಗಿ ಯೋಜನೆ ತಂದಿದ್ದು ಒಂದು ವೇಳೆ ಜೆಸಿಬಿ ಯಲ್ಲಿ ಕೆಲಸ ಮಾಡಿದ್ದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಯಾರು ಕೂಡ ಯಂತ್ರ ಬಳಸಬಾರದು ಎಂದರು. ಮತ್ತು ಜಲಪ್ರವಾಹದ ಕುರಿತು ರಿಪೋರ್ಟ್ ತರಸಿಕೊಳ್ಳುತ್ತಿದ್ದೇನೆ. ಆ ರಿಪೋರ್ಟ್ ಬಂದ ಕೂಡಲೇ ಪರಿಹಾರದ ಕುರಿತು ಸಿಎಂ ಜೊತೆಗೆ ಚರ್ಚೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
[t4b-ticker]
+ There are no comments
Add yours