ಚಳ್ಳಕೆರೆ ಶಾಸಕ‌ ಟಿ.ರಘುಮೂರ್ತಿ ಕಾರು ಅಪಘಾತ, ಅದೃಷ್ಟವಶತ್ ಶಾಸಕರು‌ ಸೇಫ್

 

 

 

 

ಹಿರಿಯೂರು: ಬಬ್ಬೂರು ಬಳಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಕಾರು ಅಪಘಾತ ನಡೆದಿದೆ.

ಚಿತ್ರದುರ್ಗ ಜಿಲ್ಲೆ‌ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮ ಬಳಿ ಘಟನೆ ಈ ಘಟನೆ ನಡೆದಿದ್ದು ಶಾಸಕರು ಪ್ರಯಾಣಿಸುತ್ತಿದ್ದ ಕಾರಿಗೆ ಜೈಲೋ ಕಾರು ಡಿಕ್ಕಿ ಒಡೆದ ಪರಿಣಾಮವಾಗಿ ಶಾಸಕರ ಇನೋವಾ ಕಾರು ಮುಂಭಾಗ ಜಖಂ ಆಗಿದೆ.‌

ಚಳ್ಳಕೆರೆಯಿಂದ ಮಸ್ಕಲ್ ಗೊಲ್ಲರಹಟ್ಟಿಗೆ ತೆರಳುತ್ತಿದ್ದ  ಶಾಸಕ ರಘುಮೂರ್ತಿ ಹಾಗು ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಸ್ಕಲ್ ಗ್ರಾಮದಿಂದ ಮುದುವೆಗೆ ಹೊರಟಿದ್ದ ಜೈಲೋ ಕಾರು.ಆದರೆ ಅಪಘಾತದಲ್ಲಿ  ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

 

 

ರೈತನ ಬಳಿ ಲಂಚ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೋಲಿಸರ ಭೇಟಿ, ಪರಿಶೀಲನೆ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ನ್ಯೂಸ್ 19 ಕನ್ನಡದ ಜೊತೆ ದೂರವಾಣಿ ಸಂಪರ್ಕಕ್ಕೆ‌ಸಿಕ್ಕ ಶಾಸಕ ಟಿ.ರಘುಮೂರ್ತಿ ಅವರು ನಾನು ಸೇಫ್ ಆಗಿದ್ದೇನೆ. ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ದೇವರ ಆಶೀರ್ವಾದದಿಂದ ಅಪಘಾತದಲ್ಲಿ ಯಾವುದೇ ತೊಂದರೆ ಆಗಿಲ್ಲ. ಕ್ಷೇತ್ರದ ಜನರಿಗೆ ಸಂದೇಶ ತಿಳಿಸಿದ್ದಾರೆ. 

ಶಾಸಕ ಟಿ.ರಘುಮೂರ್ತಿ ಶಾಸಕರು ಚಳ್ಳಕೆರೆ

 

[t4b-ticker]

You May Also Like

More From Author

+ There are no comments

Add yours