ಒಂದು ವಾರದಲ್ಲಿ ಮಳೆ ಹಾನಿಗೆ ಪರಿಹಾರ ನೀಡಲು ಕ್ರಮ: ಸಚಿವ ಬಿ.ಶ್ರೀರಾಮುಲು ಅಭಯ

 

 

 

 

ಚಳ್ಳಕೆರೆ : ತಾಲೂಕಿನ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಗೊಳಪಡುವಂತಹ  ನಾಯಕನಹಟ್ಟಿ ಹಾಗೂ ತಳುಕು ಹೋಬಳಿಗಳಲ್ಲಿ ಕಳೆದ ಒಂದು ವಾರದಿಂದ ಬಿದ್ದಂತಹ  ಬಾರಿ ಮಳೆ ಗಾಳಿಯಿಂದ 73 ಮನೆಗಳು 713 ಎಕರೆ ತೋಟಗಾರಿಕೆ ಬೆಳೆ 13 ಕುರಿಗಳು ಹಾಗೂ ಯಶವಂತ ಕುಮಾರ್ ಎನ್ನುವ ಒಬ್ಬ ವ್ಯಕ್ತಿ ಪಟ್ಟಿದ್ದು ಹಾನಿಯಾಗಿರುತ್ತದೆ ಇದಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಒಳಗಾಗಿ ಸಂಬಂಧಿಸಿದ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಇಂದು ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಯಶ್ವಂತ್ ಕುಮಾರ್ ಎನ್ನುವವರ ಸಿಡಿಲು ಬಡಿದು ಮೃತಪಟ್ಟಿದಂತಹ ಕುಟುಂಬಕ್ಕೆ   ಐದು ಲಕ್ಷದ ಪರಿಹಾರದ ಚೆಕ್ ಅನ್ನು ವಿತರಿಸಿ ಮಾತನಾಡಿ ಅತಿ ಮಳೆಯಿಂದ ಕಳೆದ ವರ್ಷದಲ್ಲಿ ಎರಡು ಹೋಬಳಿಯಲ್ಲಿ 32000 ಎಕ್ಟರ್ ಜಮೀನಿಗೆ ಪರಿಹಾರ ವಿತರಿಸಲಾಗಿದೆ 233 ಮನೆಗಳ ಸಂತ್ರಸ್ತರಿಗೂ ಪರಿಹಾರ ವಿತರಿಸಲಾಗಿದೆ ಮುಂದೆಯೂ ಘಟನೆ ಸಂಭವಿಸಿದರೆ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಎನ್ .ರಘುಮೂರ್ತಿಯವರಿಗೆ ಸೂಚಿಸಿದರು. ಹಾಗೂಮೃತ ಯಶವಂತ್ ಕುಮಾರ್ ಇವರ ಕುಟುಂಬಸ್ಥರಿಗೆ ವೈದ್ಯಕೀಯ ವೆಚ್ಚ ಮತ್ತು ವೈದ್ಯಕೀಯ ದರವನ್ನು ನೀಡುವುದಾಗಿ ಭರವಸೆ ನೀಡಿದರು.

 

 

 

ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಇಡೀ ಜಿಲ್ಲೆಯಲ್ಲೇ ಹೆಚ್ಚಿನ ಪ್ರಮಾಣದ ಬೆಳೆ ಪರಿಹಾರ ವನ್ನು ಸನ್ಮಾನ್ಯ ಸಚಿವರ ಕ್ಷೇತ್ರದಲ್ಲಿ ನಷ್ಟ ಸಂಭವಿಸಿರುವಂತೆ ನೀಡಲಾಗಿದೆ. ಇಡೀ ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ಸಚಿವರು ಸೂಚಿಸಿದ ಮೇರೆಗೆ ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದ 24 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಈ ಗ್ರಾಮಗಳಲ್ಲಿ ಪೌತಿ ಖಾತೆ ಪೋಡಿ ಪಿಂಚಣಿ ಸ್ಮಶಾನ ದಾರಿ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗಿದೆ ಸಚಿವರ ಸೂಚನೆಯಂತೆ ಉಳಿದ ಗ್ರಾಮಗಳನ್ನು ಸಂಪೂರ್ಣವಾಗಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮುಂದಿನ ಆರು ತಿಂಗಳೊಳಗೆ ಮಾಡಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖಂಡ  ಪಾಪೇಶ್ ನಾಯಕ, ಬ್ಲಾಕ್ ಬಿಜೆಪಿ ಅಧ್ಯಕ್ಷ ರಾಮ್ ರೆಡ್ಡಿ ,  ಜಯ ಪಾಲಯ್ಯ, ಬಿಜೆಪಿ ಮುಖಂಡರಾದ ಮಲ್ಲೇಶ್ ಹೊನ್ನೂರ್ ಗೋವಿಂದಪ್ಪ ಪಾತಪ್ಪನಗುಡಿ ಸುರೇಶ್ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಮುಖಂಡ ಆಂಜನಪ್ಪ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours