ಕಲಬುರಗಿ: -ನಗರದ ಹಾಗರಗಾ ಕ್ರಾಸ್ ಸಮೀಪದ ಟಿಪ್ಪು ಚೌಕ್ ಬಳಿ ಟಿಪ್ಪರ್ ಹಾಯ್ದು ಸ್ಕೂಟರ್ ನಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು, ಅವರ ಪತಿ ಹಾಗೂ 7 ವರ್ಷದ ಮಗು ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಸೀತಾಬಾಯಿ ನಾಗೇಂದ್ರ (50) ಎಂಬುವವರು ಮೃತಪಟ್ಟಿದ್ದು, ಅವರ ಪತಿ ನಾಗೇಂದ್ರ ಹಾಗೂ ಅವರ ಮೊಮ್ಮಗನಿಗೆ ಗಾಯಗಳಾಗಿವೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ರಸ್ತೆತಡೆ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹಾಗರಗಾ ಕ್ರಾಸ್ ನಿವಾಸಿಗಳು ಮುಖಂಡರಾದ ಇಮ್ತಿಯಾಜ್ ಸಿದ್ದಿಕಿ, ಅಲಂದರ್ ಜೈದಿ, ರವಿಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ರಸ್ತೆತಡೆ ನಡೆಸಿ ಹಾಗರಗಾ ಕ್ರಾಸ್ ನಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
[t4b-ticker]
+ There are no comments
Add yours